ಮಂಡ್ಯ ಜಿಲ್ಲಾ ನಾಯಕ ಸಂಘದ ವತಿಯಿಂದ ಜಿಲ್ಲಾಧ್ಯಕ್ಷ ಅಗ್ರಹಾರಬಾಚಹಳ್ಳಿ ಆರ್.ಜಗಧೀಶ್ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಣೆ
ವಾಲ್ಮೀಕಿ ಮಹರ್ಷಿಗಳ ಗುಣಗಾನ ಮಾಡಿದ ಆರ್.ಜಗಧೀಶ್..
ಕೆ.ಆರ್.ಪೇಟೆ ಪಟ್ಟಣದ ನಾಯಕ ಸಂಘದ ಕಛೇರಿಯಲ್ಲಿ ಆದಿಕವಿ ವಾಲ್ಮೀಕಿ ಜಯಂತಿಯನ್ನು ಸಂಘದ ಜಿಲ್ಲಾಧ್ಯಕ್ಷ ಅಗ್ರಹಾರಬಾಚಹಳ್ಳಿ ಆರ್.ಜಗಧೀಶ್ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು..
ನಮ್ಮ ಸಂಸ್ಕೃತಿ ಮತ್ತು ಪರಂಪರೆ ಹಾಗೂ ಮಾನವೀಯ ಸಂಬAಧಗಳ ಬಗ್ಗೆ ಬೆಳಕು ಚೆಲ್ಲುವ ವಿಶ್ವಮಾನ್ಯವಾದ ರಾಮಾಯಣ ಗ್ರಂಥವನ್ನು ರಚಿಸಿ ಜೀವನ ಸಂದೇಶಗಳ ಮೌಲ್ಯಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿರುವ ವಾಲ್ಮೀಕಿ ಅವರು ಬೇಡರಾಗಿದ್ದರೂ ಸ್ವಯಂ ಪರಿವರ್ತನೆಯಾಗಿ ರಾಮಾಯಣ ಮಹಾಗ್ರಂಥವನ್ನು ರಚಿಸಿ ಆದಿಕವಿಗಳಾಗಿ ಹೊರಹೊಮ್ಮಿರುವ ವಾಲ್ಮೀಕಿ ಮಹರ್ಷಿಗಳ ಜೀವನದ ಆದರ್ಶಗಳನ್ನು ಯುವಜನರು ಕಡ್ಡಾಯವಾಗಿ ಪಾಲಿಸುವ ಮೂಲಕ ಜಾತಿಮತ ಪಂಥಗಳಿAದ ಮುಕ್ತವಾದ ಸಮ ಸಮಾಜದ ನಿರ್ಮಾಣಕ್ಕೆ ನಾಂಧಿ ಮಾಡಬೇಕು ಎಂದು ಅಗ್ರಹಾರಬಾಚಹಳ್ಳಿ ಆರ್. ಜಗಧೀಶ್ ಕರೆ ನೀಡಿದರು..
ಕಾರ್ಯಕ್ರಮದಲ್ಲಿ ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ನರೇಂದ್ರ ನಾಯಕ, ಬಸವನಹಳ್ಳಿ ಅರ್ಜುನನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯಕ, ದೊಡ್ಡಲಿಂಗನಾಯಕ, ರಾಮಕೃಷ್ಣನಾಯಕ, ಜಿಲ್ಲಾ ಉಪಾಧ್ಯಕ್ಷ ಗ್ರಾ.ಪಂ ಸದಸ್ಯ ಅಕ್ಕಿಹೆಬ್ಬಾಳು ಹರೀಶ್, ಸಂಘದ ಉಪಾಧ್ಯಕ್ಷೆ ಗ್ರಾ.ಪಂ ಸದಸ್ಯೆ ಬೊಮ್ಮೇನಹಳ್ಳಿ ಲತಾ, ಕಾರಿಗನಹಳ್ಳಿ ಲಕ್ಷ್ಮಿರಾಜು, ಕಾಮನಹಳ್ಳಿ ಶೋಭಾರಾಮಚಂದ್ರ, ಯಜಮಾನ ನರಸಿಂಹಯ್ಯ, ಹೊಸಹೊಳಲು ಸತ್ಯಪ್ಪ, ಆಲಂಬಾಡಿಕಾವಲು ಗಾರೆ ರಾಜನಾಯಕ, ಬಿಜೆಪಿ ನೇಕಾರ ಪ್ರಕೋಷ್ಠ ಜಿಲ್ಲಾಧ್ಯಕ್ಷ ಬಿಗ್ ಬಾಸ್ ಮೋಹನ್, ಕಾರ್ಯದರ್ಶಿ ಶಿವಪ್ರಕಾಶ್, ಮುರುಕನಹಳ್ಳಿ ರಾಮಕೃಷ್ಣನಾಯಕ, ಸಾರಂಗಿ ಕುಮಾರಸ್ವಾಮಿ, ತಾಲ್ಲೂಕು ಸಮಾನ ಮನಸ್ಕರ ವೇದಿಕೆಯ ಸಂಚಾಲಕ ಗ್ರಾಮಭಾರತಿ ಬಸವೇಗೌಡ, ಅಕ್ಕಿಹೆಬ್ಬಾಳು ವೆಂಕಟೇಶನಾಯಕ ಮತ್ತಿತರರು ಉಪಸ್ಥಿತರಿದ್ದರು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ
More Stories
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ
ದೇವಿರಮ್ಮಣ್ಣೆ ಕೆರೆ ಅಂಗಳಕ್ಕೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ರೈತ ಬಾಂಧವರು