May 2, 2024

Bhavana Tv

Its Your Channel

ಮಾಘಮಾಸದ ಪವಿತ್ರ ಹುಣ್ಣಿಮೆಯ ಅಂಗವಾಗಿ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ

ಕೆ.ಆರ್.ಪೇಟೆ:– ಮಾಘಮಾಸದ ಪವಿತ್ರ ಹುಣ್ಣಿಮೆಯ ಅಂಗವಾಗಿ ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಪುರಸ್ಕಾರಗಳು ತಾಯಿ ಚೌಡೇಶ್ವರಿಗೆ ನಡೆದವು ..

ಕೃಷ್ಣರಾಜಪೇಟೆ ಪಟ್ಟಣದ ಸಮಾಜಸೇವಕರು ಹಾಗೂ ದಾನಿಗಳಾದ ಪರಿಮಳ ನಾಗರಾಜ ಶೆಟ್ಟಿ ಹಾಗೂ ನಾಗರತ್ನಮ್ಮ ಸಿದ್ಧಪ್ಪ ಶೆಟ್ಟಿ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು..

ಮಾಘ ಹುಣ್ಣಿಮೆಯ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಶ್ರೀ ಚೌಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾದರು..

ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಉಚಿತ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು..

ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹೆಚ್.ಎಂ.ಚAದ್ರಶೇಖರ್, ಕಾರ್ಯದರ್ಶಿ ವಿದ್ಯಾರ್ಥಿ ಭಂಡಾರ್ ಸುರೇಶ್, ಮಾಜಿಅಧ್ಯಕ್ಷರಾದ ಕಬಾಬ್ ನಾರಾಯಣಪ್ಪ, ಕೆ.ಆರ್.ಚಂದ್ರಶೇಖರ್, ಪುರಸಭೆಯ ಮಾಜಿಅಧ್ಯಕ್ಷ ಕೆ.ಸಿ.ವಾಸು, ಶ್ರೀರಂಗಪಟ್ಟಣ ಕುಮಾರಸ್ವಾಮಿ, ಎಂಜಿನಿಯರ್ ವೆಂಕಟೇಶ್, ಹಂಸರಮೇಶ್, ಕೆ.ಆರ್.ಮಹೇಶ್, ಕೆ.ಎಸ್.ಮಧುಸೂದನ್, ಕೆ.ಜಿ.ಕುಮಾರ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು..

ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಅವಧಾನಿಗಳು ಹಾಗೂ ರೋಹಿತ್ ಶರ್ಮಾ ಅವರು ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ. ಮಂಡ್ಯ

error: