May 7, 2024

Bhavana Tv

Its Your Channel

ಮಹಾದೇವಸ್ವಾಮಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಕೆ.ಎಸ್.ಸಂತೋಷ್ ಕುಮಾರ್

ಕೆ.ಆರ್.ಪೇಟೆ:– ತಾಲೂಕಿನ ಶೀಳನೆರೆ ಹೋಬಳಿಯ ಅಂಚನಹಳ್ಳಿ ಗ್ರಾಮದ ಮಣಿಯಮ್ಮ ಮಹಾದೇವಸ್ವಾಮಿ ಎಂಬುವವರ ನಿವಾಸಕ್ಕೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಯುವ ಮುಖಂಡರು ಹಾಗು ಪುರಸಭಾ ಸದಸ್ಯರು ಆಗಿರುವ ಕೆ.ಎಸ್.ಸಂತೋಷ್ ಕುಮಾರ್(ಬಸ್) ಭೇಟಿ ನೀಡಿ ಮಹಾದೇವಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದರು
ಮಹಾದೇವಸ್ವಾಮಿ ಪುತ್ರ ಮಂಜು(26) (ಸಿದ್ದಲಿಂಗಸ್ವಾಮಿ)ಕಳೆದ ಒಂದೂವರೆ ವರ್ಷಗಳ ಹಿಂದೆ ಮೈಸೂರಿನಿಂದ ತಮ್ಮ ಸ್ವಗ್ರಾಮ ಅಂಚನಹಳ್ಳಿಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ವಾಹನಹೊಂದು ಡಿಕ್ಕಿ ಹೊಡೆದು ತೀವ್ರ ಸ್ವರೂಪದ ಗಾಯಗಳಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಯಾವುದೇ ಫಲಕಾರಿಯಾಗಿರಲಿಲ್ಲ ಈ ವೇಳೆ ಕುಟುಂಬದವರು ವೈದ್ಯರ ಸಲಹೆ ಮೇರೆಗೆ ಮಂಜುವನ್ನು ಮನೆಗೆ ಕರೆತಂದು ಮನೆಯಲ್ಲೇ ಚಿಕಿತ್ಸೆ ನೀಡಿ ಹಾರೈಕೆ ಮಾಡುತ್ತಿದ್ದರು ಆದರೂ ಒಂದೂವರೆ ವರ್ಷದಿಂದ ಗುಣಮುಖ ಕಾಣಲಿಲ್ಲ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಮಹಾದೇವಸ್ವಾಮಿಯವರ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತೀರ ನೊಂದಿದ್ದರು ಬಡತನದ ಕುಟುಂಬವಾದ್ದರಿAದ ಸಂಕಷ್ಟಕ್ಕೆ ಸಿಲುಕಿದ ಪರಿಣಾಮ ಅದೇ ಗ್ರಾಮದ ಮುಖಂಡರೊಬ್ಬರು ಈ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಿಷಯವನ್ನು ಸಂತೋಷ್ ಕುಮಾರ್ ಅವರಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿದ್ದರು ವಿಷಯ ತಿಳಿದು ತಕ್ಷಣ ಸ್ಪಂದಿಸಿದ ಸಂತೋಷ್ ಸಂಕಷ್ಟಕ್ಕೀಡಾಗಿದ್ದ ಕುಟುಂಬಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿ ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಸದಸ್ಯ ಯೋಗೇಶ್,ಮಾಜಿ ಅಧ್ಯಕ್ಷ ಶಿವಕುಮಾರ್, ಹಾಲಿ ಸದಸ್ಯ ರಾಜು,ಗ್ರಾಮದ ಮುಖಂಡರಾದ ಪ್ರಕಾಶ್, ಮಂಜಣ್ಣ,ಸಿದ್ದಪ್ಪಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ಶಂಭು ಕಿಕ್ಕೇರಿ

error: