ಕೆ.ಆರ್.ಪೇಟೆ :-ಚಿನ್ನಾಭರಣಗಳು ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಆಪತ್ ಕಾಲದಲ್ಲಿ ನೆರವಿಗೆ ಬರುವ ನಿಜವಾದ ಬಂಧುಗಳಿದ್ದAತೆ ಎಂದು ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಹೇಳಿದರು ..
ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿರುವ ಐಐಎಫ್ ಎಲ್ ಗೋಲ್ಡ್ ಲೋನ್ ಕಂಪನಿಯ ಚಿನ್ನಾಭರಣಗಳ ಸಾಲ ಉತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು..
ಕೃಷ್ಣರಾಜಪೇಟೆ ಪಟ್ಟಣದಲ್ಲಿ ಐಐಎಫ್ ಎಲ್ ಗೋಲ್ಡ್ ಲೋನ್ ಕಂಪನಿಯು ರಿಯಾಯಿತಿ ದರದಲ್ಲಿ ಚಿನ್ನದ ಒಡವೆಗಳು ಮತ್ತು ಆಭರಣಗಳ ಮೇಲೆ ಸಾಲಸೌಲಭ್ಯವನ್ನು ನೀಡುತ್ತಾ ತಾಲ್ಲೂಕಿನ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸ್ತುತ ಕಂಪನಿಯು ಚಿನ್ನಾಭರಣಗಳ ಮೇಲೆ ನೀಡುತ್ತಿರುವ ಸಾಲದ ಉತ್ಸವವು ನಿಜವಾಗಿಯೂ ಬಡವರು ಹಾಗೂ ಮಧ್ಯಮ ವರ್ಗಗಳ ಜನರಿಗೆ ಸಹಾಯವಾಗಲಿದೆ. ಶಾಲಾ ಕಾಲೇಜುಗಳ ಪ್ರವೇಶಕ್ಕೆ ಫೀಸ್ ಕಟ್ಟಲು, ಆರೋಗ್ಯ ಸಮಸ್ಯೆ ಸೇರಿದಂತೆ ಬದುಕಿನಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾದ ಸಮಯದಲ್ಲಿ ಚಿನ್ನಾಭರಣಗಳು ನಮ್ಮ ನೆರವಿಗೆ ಆಪ್ತಮಿತ್ರನಂತೆ ಬರುವುದಲ್ಲದೇ, ಸಂಕಷ್ಠದಲ್ಲಿ ಹಣಕಾಸಿನ ನೆರವು ಕೊಡಿಸಿ ಕೈಹಿಡಿದು ಮುನ್ನಡೆಸುವ ಆತ್ಮೀಯ ಬಂಧುವಿದ್ದAತೆ ಎಂದು ಹೇಳಿದ ಮಹಾದೇವಿನಂಜುAಡ ಐಐಎಫ್ ಎಲ್ ಕಂಪನಿಯ ಚಿನ್ನಾಭರಣಗಳ ಸಾಲದ ಉತ್ಸವವು ವರದಾನವಾಗಿದ್ದು ಇದರ ಸದುಪಯೋಗ ಪಡಿಸಿಕೊಂಡು ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸಬೇಕು ಎಂದು ಕರೆ ನೀಡಿದರು..
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೆ.ಆರ್.ಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿಅಧ್ಯಕ್ಷ ಕೆ.ಆರ್.ನೀಲಕಂಠ ಭಾಗವಹಿಸಿ ಚಿನ್ನಾಭರಣಗಳ ಸಾಲ ಉತ್ಸವಕ್ಕೆ ಶುಭ ಕೋರಿದರು.
ಐಐಎಫ್ ಎಲ್ ಗೋಲ್ಡ್ ಲೋನ್ ಕಂಪನಿಯ ಕೆ.ಆರ್.ಪೇಟೆ ಶಾಖೆಯ ವ್ಯವಸ್ಥಾಪಕಿ ಕಿಕ್ಕೇರಿ ರಾಜೇಶ್ವರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಂಪನಿಯ ಸಿಬ್ಬಂಧಿಗಳಾದ ರಾಜೇಶ್, ಹರೀಶ್, ತೇಜಸ್, ಪ್ರಮೋದ್, ಕಾವ್ಯ ಮತ್ತು ಪತ್ರಕರ್ತ ಸೈಯ್ಯದ್ ಖಲೀಲ್ ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ