May 14, 2024

Bhavana Tv

Its Your Channel

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನಗಳಿಸಿರುವ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಕೃಷ್ಣರಾಜಪೇಟೆ :- ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನಗಳಿಸಿರುವ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯಮಿ ರಾಜಶೇಖರ್ ಹಾಗೂ ತಾಲ್ಲೂಕು ಪಂಚಾಯತಿ ಮಾಜಿಅಧ್ಯಕ್ಷೆ ವಿಜಯಲಕ್ಷ್ಮಿ ಅವರಿಂದ ಹೃದಯಸ್ಪರ್ಶಿ ಸನ್ಮಾನ, ನಗದುಪುರಸ್ಕಾರ ನೀಡಿ ಗೌರವಿಸಿದ ದಂಪತಿಗಳು ..

ಕೆ.ಆರ್.ಪೇಟೆ ತಾಲ್ಲೂಕು ಪಂಚಾಯತಿ ಮಾಜಿಅಧ್ಯಕ್ಷೆ ವಿಜಯಲಕ್ಷ್ಮಿ ಹಾಗೂ ಸಮಾಜಸೇವಕರಾದ ರಾಜಶೇಖರ್ ಅವರು ತಮ್ಮ ಮೊಮ್ಮಗ ಸಮರ್ಥ್ ನ 04ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿರುವ ಮೂವರು ಪ್ರತಿಭಾವಂತ ವಿದ್ಯಾರ್ಥಿನಿಯರಾದ ಮೊನಾಲಿಸ(624), ಹರ್ಷಿತ(624), ಮತ್ತು ಯು.ಬಿ.ರೇವತಿ(623) ಅವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಮುಂದಿನ ಶೈಕ್ಷಣಿಕ ಪ್ರಗತಿಗೆ ಸಹಾಯವಾಗುವಂತೆ ತಲಾ 02 ಸಾವಿರ ರೂ ನಗಧು ಪುರಸ್ಕಾರ ನೀಡಿ ಗೌರವಿಸಿ ಶುಭ ಹಾರೈಸಿದರು..

ಈ ಸಂದರ್ಭದಲ್ಲಿ ಕೃಷ್ಣರಾಜ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಎಸ್.ಬಿ.ಲೋಕೇಶ್, ಪುರಸಭಾ ಸದಸ್ಯ ಕೆ.ಆರ್.ನೀಲಕಂಠ, ಸಮಾಜಸೇವಕಿ ದ್ರಾಕ್ಷಾಯಿಣಿ ಚಂದ್ರಶೇಖರ್, ಮೀನಾ ಅಂಬರೀಶ್, ರಾಜಸ್ತಾನ್ ಸೇವಾ ಸಮಿತಿಯ ಸಂಚಾಲಕ ರಮೇಶ್ ಚೌಧರಿ, ರಾಜ್ಯ ಬಿಜೆಪಿ ಎಸ್.ಟಿ.ಮೋರ್ಚಾ ಕಾರ್ಯಕಾರಣಿ ಸದಸ್ಯ ಆರ್.ಜಗಧೀಶ್, ಮುಖಂಡರಾದ ರಾಮೇಗೌಡ, ಸಿಂದಘಟ್ಟ ನಾಗೇಶ್, ಬೂರಿ ಜಯಮ್ಮ, ಹಾದನೂರು ಪರಮೇಶ್, ಪತ್ರಕರ್ತ ಆರ್.ಶ್ರೀನಿವಾಸ್, ಸೈಯ್ಯದ್ ಖಲೀಲ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: