May 4, 2024

Bhavana Tv

Its Your Channel

ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶೋಭ ಕಾಂತರಾಜು ಅವಿರೋಧ ಆಯ್ಕೆ

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಚಿನ್ನೇನಹಳ್ಳಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನಲೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಶಿ ಶೋಭ ಕಾಂತರಾಜು ರವರನ್ನು ಹೊರತು ಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಶೋಭ ಕಾಂತರಾಜು ರವರನ್ನು ನೂತನ ಅಧ್ಯಕ್ಷರೆಂದು ಚುನಾವಣಾ ಅಧಿಕಾರಿಗಳು ಘೋಷಿಸಿದರು..

ಈ ಸಂದರ್ಭದಲ್ಲಿ ಮನ್ ಮುಲ್ ನಿರ್ದೇಶಕ ಹೆಚ್ ಟಿ ಮಂಜು, ಕಿಕ್ಕೇರಿ ಹೋಬಳಿಯ ಜೆ.ಡಿ.ಎಸ್ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ, ಸೇರಿದಂತೆ ಮುಖಂಡರು ನೂತನ ಅಧ್ಯಕ್ಷರಿಗೆ ಸಿಹಿ ತಿನ್ನಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕರಾದ ಉಷಾ ಲವೇಶ್, ವಿಜಯಲಕ್ಷಿ ರಾಮಕೃಷ್ಣ, ನೇತ್ರ ಕಾಳೇಗೌಡ, ತಾಯಮ್ಮ ಕೃಷ್ಣೇಗೌಡ, ಗಿರಿಜ ಅಣ್ಣೇಗೌಡ, ಜಯಮ್ಮ ಕಾಳೇಗೌಡ, ಶ್ರೀಮತಿ ಲಕ್ಷ್ಮಮ್ಮ ಅಣ್ಣೇಗೌಡ, ಭಾಗ್ಯಮ್ಮ ಸುರೇಶ್, ಸೇರಿದಂತೆ ಮತ್ತಿತ್ತರರು ಇದ್ದರು

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: