ಕೃಷ್ಣರಾಜಪೇಟೆ : ಅನಾರೋಗ್ಯದಿಂದ ಮೃತಪಟ್ಟ ಪತ್ರಕರ್ತ ಹಾಗೂ ಪತ್ರಿಕಾ ಛಾಯಾಗ್ರಹಕ ಬೂಕನಕೆರೆ ಪ್ರಕಾಶ್ ರವರ ಕುಟುಂಬಕ್ಕೆ ಆರ್ಥಿಕ ನೆರೆವು ನೀಡಿ ಮಾನವೀಯತೆ ಮೆರೆದ ಐನೋರಹಳ್ಳಿ ಮಲ್ಲೇಶ್
ಕೃಷ್ಣರಾಜಪೇಟೆ ತಾಲ್ಲೂಕಿನ ಪತ್ರಕರ್ತ ಹಾಗೂ ಪತ್ರಿಕಾ ಛಾಯಾಗ್ರಾಹಕನಾಗಿ ತಾಲ್ಲೂಕಿನ ಜನತೆಗೆ ಚಿರಪರಿಚಿತರಾಗಿ ಸಮಾಜಸೇ ಸೇವೆಯಲ್ಲೂ ತೊಡಗಿಸಿಕೊಂಡಿದ್ದ ಬೂಕನಕೆರೆ ಪ್ರಕಾಶ್ ರವರು ಅನಾರೋಗ್ಯದಿಂದ ನಿಧನರಾಗಿದ್ದರು ಇಂದು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್ ರವರು ಪ್ರಕಾಶ್ ರವರ ಮನೆಗೆ ಭೇಟಿ ನೀಡಿ ಮೃತ ಕುಟುಂಬಕ್ಕೆ ದೈರ್ಯ ತುಂಬುದರ ಜೊತೆಗೆ ಕೈಲಾದ ಆರ್ಥಿಕ ನೆರೆವು ನೀಡಿ ಮಾನವೀಯತೆಯ ಮೆರೆದರು..
ನಂತರ ಮಾತನಾಡಿ ಪತ್ರಕರ್ತರು ತಮ್ಮ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕು ಕೆಲಸದ ಒತ್ತಡಕ್ಕೆ ಸಿಲುಕಿ ಆರೋಗ್ಯ ಹಾಳು ಮಾಡಿಕೊಳ್ಳದೆ. ತಾಲ್ಲೂಕಿನ ಎಲ್ಲಾ ಪತ್ರಕರ್ತರು ಯಾವುದೇ ಭಿನ್ನಮತ ತೊರದೆ ಒಗ್ಗಟಿನಲ್ಲಿ ಕಾರ್ಯನಿರ್ವಹಿಸುವ ಜೊತೆಗೆ ಸಮಾಜದ ಅಂಕು ಡೊಂಕುಗಳ ಬಗ್ಗೆ ತಿದ್ದುವ ಕೆಲಸ ಮಾಡುವಂತೆ ಸಲಹೆ ನೀಡಿದರು
ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರು ಹೆಳವೇಗೌಡ್ರು, ಗ್ರಾಮ ಪಂಚಾಯತಿ ಮಾಜಿ ಸದಸ್ಯರು ಸ್ಟೂಡಿಯೋ ಮಂಜು, ಪತ್ರಕರ್ತ ಕಿಕ್ಕೇರಿ ಶಂಭು, ಕುಮಾರ ಪಡೆಯ ತಾಲ್ಲೂಕು ಉಪಾದ್ಯಕ್ಷ ಸಾದೋಗನಹಳ್ಳಿ ಲೋಕೇಶ್, ಯುವ ಮುಖಂಡರಾದ ರೆಬಲ್ ರವಿ, ಕೋಡಿಹಳ್ಳಿ ಲೋಕೇಶ್, ಮತ್ತಿತ್ತರರು ಇದ್ದರು..
ವರದಿ ಶಂಭು ಕಿಕ್ಕೇರಿ ಕೃಷ್ಣರಾಜಪೇಟೆ
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ