ಮಳವಳ್ಳಿ : ಪೆಟ್ಟಿಗೆ ಅಂಗಡಿಯನ್ನು ಸಾಗಾಣಿಕೆ ಮಾಡುವ ವೇಳೆ ಅಂಗಡಿ ಉರುಳಿ ಬಿದ್ದು ಅದರ ತಳಭಾಗಕ್ಕೆ ಸಿಕ್ಕ ವ್ಯಕ್ತಿಯೋರ್ವ ಸಾವನ್ನಪ್ಪಿರುವ ದುರ್ಘಟನೆ ಯೊಂದು ಮಳವಳ್ಳಿ ತಾಲ್ಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಮೂಲತಃ ಅಗಸನಪುರದ ವಾಸಿಯಾದ ಸಿದ್ದರಾಜು ಎಂಬುವರೇ ಮೃತಪಟ್ಟ ದುರ್ದೈವಿಯಾಗಿದ್ದು ಸುಮಾರು ೪೫ ವರ್ಷ ವಯಸ್ಸಿನ ಇವರು ಅಗಸನಪುರ ಭಾಗದಲ್ಲಿ ಕೆಇಬಿ ಮೀಟರ್ ರೀಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೆಂದು ಗೊತ್ತಾಗಿದೆ.
ನೆನ್ನೆ ಸಾಯಂಕಾಲ ೬ ಗಂಟೆ ಸಮಯದಲ್ಲಿ ಇವರ ಸ್ನೇಹಿತನೊಬ್ಬ ಪೆಟ್ಟಿಗೆ ಅಂಗಡಿಯೊAದನ್ನು ಖರೀದಿಸಿದ್ದು ಅದನ್ನು ಅಗಸನಪುರ ಗ್ರಾಮಕ್ಕೆ ಸಾಗಿಸುವ ಯತ್ನದಲ್ಲಿದ್ದಾಗ ಆಯತಪ್ಪಿ ಪೆಟ್ಟಿಗೆ ಅಂಗಡಿ ಉರುಳಿಬಿದ್ದು ಅದರ ತಳಭಾಗಕ್ಕೆ ಸಿಕ್ಕು ತೀವ್ರವಾಗಿ ಗಾಯಗೊಂಡ ಇವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ರೆಂದು ವರದಿಯಾಗಿದೆ.
ಮೃತ ಸಿದ್ದರಾಜು ಪತ್ನಿ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ