ಮಳವಳ್ಳಿ: ಚಿತ್ರನಟ ಪುನೀತ್ರಾಜ್ಕುಮಾರ್ ಅವರ ಅಭಿಮಾನಿಗಳು ಆತ್ಮಹತ್ಯೆಗೆ ಮುಂದಾಗ ಬಾರದೆಂದು ಡಾ. ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಮನವಿ ಮಾಡಿದರು.
ಪಟ್ಟಣದ ಬಿ.ಆರ್ .ಸಿ ಕಚೇರಿಯಲ್ಲಿ ವಿಶ್ವ ಮಾನವ ವೇದಿಕೆ ವತಿಯಿಂದ ಚಿತ್ರನಟ ನಟ ಪುನೀತ್ ರಾಜ್ಕುಮಾರ್ ಅವರ ನುಡಿನಮನ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಪುನೀತ್ ಅವರಿಗೆ ಗೌರವ ನೀಡಬೇಕಾದರೇ ಅವರ ಹೆಸರಿನಲ್ಲಿ ಸಮಾಜ ಸೇವೆ ಮಾಡಬೇಕೇ ಹೊರತು ಆತ್ಮಹತ್ಯೆ ಮಾಡಿಕೊಳ್ಳ ಬಾರದೆಂದು ತಿಳಿಸಿದರು.
ಪುನೀತ್ರಾಜ್ಕುಮಾರ್ ಬಾಲನಟನಾಗಿ ಚನಲಚಿತ್ರಕ್ಕೆ ಪಾದರ್ಪಣೆ ಮಾಡಿ ದೊಡ್ಡ ಕಲಾವಿದರಾಗಿ ತಮ್ಮದೇ ಆದ ಶ್ರೇಷ್ಟ್ರ ನಟನೆಯೊಂದಿಗೆ ದೇಶದಲ್ಲಿಯೇ ಲಕ್ಷಾಂತರ ಅಭಿಮಾನವನ್ನು ಮೆರೆದಿದ್ದಾರೆಂದು ಹೇಳಿದರು.
ಪುನೀತ್ ಅವರು ದೊಡ್ಡ ಕಲಾವಿಧರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು, ಆದರೇ
ತೆರೆಮೆರೆಯಲ್ಲಿ ಮಾಡಿದ ಸಮಾಜ ಸೇವೆ ಅವರ ನಿಧನದ ನಂತರ ಹೊರಬರುತ್ತಿದೆ, ಮಾನವೀಯತೆ ಗುಣವುಳ್ಳ ಪುನೀತ್ ಯುವ ಜನರಿಗೆ ಅದರ್ಶರಾಗಿದ್ದಾರೆಂದು ತಿಳಿಸಿದರು.
ವಿಶ್ವಮಾನವ ವೇದಿಕೆ ಅಧ್ಯಕ್ಷ ಮ.ಸಿ ನಾರಾಯಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವರನಟ ಡಾ.ರಾಜ್ಕುಮಾರ್ ಅವರ ಕಿರಿಯ ಪುತ್ರ ಪುನೀತ್ರಾಜ್ ತಂದೆ ಮೀರಿಸುವಂತ ಸಾಧನೆ ಮಾಡಿದ್ದಾರೆ, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿ ದೇಶವೇ ಮೆಚ್ಚುವಂತ ಅಪಾರವಾದ ಸಮಾಜಸೇವೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು
ಶ್ಲಾಘೀಸಿದರು.
ವೇದಿಕೆಯಲ್ಲಿ ಯೋಗಗುರು ಮಲ್ಲಿಕಾಜು೯ನಸ್ವಾಮಿ, ಪ್ರಾಂತ ರೈತ ಸಂಘ ಹಾಗೂ ವಿಶ್ವ ಮಾನವ ವೇದಿಕೆ ಪ್ರಧಾನಕಾರ್ಯದರ್ಶಿ ಭರತ್ರಾಜ್, ಉಪನ್ಯಾಸಕರಾ ನಾಗೇಶ್ ,ಕುಮಾರ್, ಮೂತಿ೯ ಸೇರಿದಂತೆ ಇತರರು ಇದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ