May 5, 2024

Bhavana Tv

Its Your Channel

ಮಾರ್ಕೋನಹಳ್ಳಿ ಡ್ಯಾಂನಲ್ಲಿ ನೀರಿನಲ್ಲಿ ಆಟವಾಡಲು ಹೋಗಿ ಕೊಚ್ಚಿಹೋದ ನಾಲ್ವರ ಪೈಕಿ ಇಬ್ಬರು ಸಹೋದರರ ಶವ ಪತ್ತೆ

ನಾಗಮಂಗಲ ತಾಲ್ಲೂಕಿನ ಮಾರ್ಕೋನಹಳ್ಳಿ ಡ್ಯಾಂನಲ್ಲಿ ನೀರಿನಲ್ಲಿ ಆಟವಾಡಲು ಹೋಗಿ ಕೊಚ್ಚಿಹೋದ ನಾಲ್ವರ ಪೈಕಿ ಇಬ್ಬರ ಸಹೋದರ ಶವ ಪತ್ತೆಯಾಗಿರುವ ಘಟನೆ ನಾಗಮಂಗಲ ಗ್ರಾಮಾಂತರ ಪೊಲೀಸಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯುಡಿಯೂರು ಗ್ರಾಮ ಶ್ರೀನಿವಾಸ್ ಪುತ್ರರಾದ ರಾಜು ೨೪, ಅಪ್ಪು ಅಲಿಯಾಸ್ ಗುಂಡ ೧೯ ಮೃತಪಟ್ಟ ದುರ್ದೈವಿಗಳು,

ಇಬ್ಬರು ನಿನ್ನೆ ದಿನ ಬೆಳಿಗ್ಗೆ ಮನೆಯಿಂದ ಟಿವಿಎಸ್ ಎಕ್ಸೆಲ್ ಸೂಪರ್ ನಲ್ಲಿ ಹೊರಗಡೆ ಹೋದವರು ಸಂಜೆಯಾದರೂ ಮನೆಗೆ ಬಾರದೆ ಕಾಣೆಯಾಗಿದ್ದ ಬಗ್ಗೆ ದೂರು ದಾಖಲಾಗಿತ್ತು
ಇಂದು ಮಾರ್ಕೋನಹಳ್ಳಿ ಡ್ಯಾಂ ನ ಬಳಿ ಸ್ಕೂಟರ್ ನಿಂತಿದ್ದು, ಡ್ಯಾಂನಲ್ಲಿ ಶೋಧನೆ ನಡೆಸಿದಾಗ ಶವಗಳು ಪತ್ತೆಯಾಗಿದೆ

ಶವಗಳನ್ನು ಆಧಿಚುಂಚನಗಿರಿ ಆಸ್ವತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.ಇದಲ್ಲದೆ ಕುಣಿಗಲ್ ಪಟ್ಟಣದ ಪರ್ಮಿನ್ ತಾಜ್ ಹಾಗೂ ಸಾಧೀಯ ರವರು ನೀರಿನಲ್ಲಿ ಕೊಚ್ಚಿ ಹೋಗಿದ್ದು ಶವದ ಶೋಧನೆ ಕಾರ್ಯ ನಡೆಯುತ್ತಿದೆ
ಇನ್ನೂ ಈ ಸಂಬAಧ ನಾಗಮಂಗಲ ಗ್ರಾಮಾಂತರ ಪೊಲೀಸಠಾಣೆ ದೂರು ದಾಖಲು ಮಾಡಿಕೊಂಡಿದ್ದಾರೆ

ಸ್ಥಳಕ್ಕೆ ನಾಗಮಂಗಲ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು

ವರದಿ: ಚಂದ್ರಮೌಳಿ ನಾಗಮಂಗಲ

error: