ನಾಗಮಂಗಲ: ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ವಿಶ್ವಚೇತನ ಟ್ರಸ್ಟ್ ಹೊರತಂದಿರುವ ನೂತನ ಸಂವತ್ಸರದ ಕ್ಯಾಲೆಂಡರ್ ಬಿಡುಗಡೆಯನ್ನು ಮಾಜಿ ಸಂಸದ ಎಲ್.ಅರ್. ಶಿವರಾಮೇಗೌಡ ಹಾಗೂ ಜೆ.ಡಿ.ಎಸ್. ಮುಖಂಡರಾದ ಜವರನಹಳ್ಳಿ ಗೌರೀಶ್ ಅವರು ಬಿಡುಗಡೆ ಮಾಡಿದರು
ಕರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ ರವರು ಹಡೆನಹಳ್ಳಿ ಉಮೇಶ್ ಅವರು ಕ್ರಿಯಾಶೀಲ ವ್ಯಕ್ತಿಯಾಗಿದ್ದು ವೃತ್ತಿಯಲ್ಲಿ ವಕೀಲರು ಜೊತೆಗೆ ಪತ್ರರ್ತ. ಲೇಖಕ. ಹಲವಾರು ಪುಸ್ತಕಗಳನ್ನು ಹೊರತಂದಿದ್ದಾರೆ ತಾಲೂಕಿನಾದ್ಯಂತ ಉಚಿತ ಆರೋಗ್ಯ ಸೇವೆ, ಕಾನೂನು ಅರಿವು, ಮಹಿಳಾ ಜಾಗೃತಿ ಶಿಬಿರ, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ಈ ಎಲ್ಲಾ ಕರ್ಯಕ್ರಮಗಳು ಟ್ರಸ್ಟನ ಅಡಿಯಲ್ಲಿ ನಡೆಯುತ್ತಿವೆ ಮುಂದಿನ ದಿನದಲ್ಲಿ ಒಳ್ಳೆಯದಾಗಲಿಎಂದು ಹಾರೈಸಿದರು
ನಾಗಮಂಗಲ ತಾಲೂಕು ಜಾತ್ಯತೀತ ಜನತಾದಳದ ಮುಖಂಡರಾದ ಜವರನಹಳ್ಳಿ ಗೌರೀಶ್ ಮಾತನಾಡಿ ಒಂದು ಸಂಸ್ಥೆಯನ್ನು ಹುಟ್ಟುಹಾಕಿ ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುವುದು ಕಷ್ಟಕರ ಕೆಲಸ ಉಮೇಶ್ ರವರು ಜನಪರವಾದ ಕಾಳಜಿ ಇಟ್ಟುಕೊಂಡು ಸರ್ವಜನಿಕವಾಗಿ ಕೆಲಸಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಮುಂದಿನ ದಿನದಲ್ಲಿ ತಾಲೂಕು ಮಟ್ಟದಲ್ಲಿ ಉತ್ತಮ ಹೆಸರನ್ನು ಹೊಂದಲಿ ಎಂದು ಹೇಳಿದರು
ಕರ್ಯಕ್ರಮದಲ್ಲಿ ಮುಳುಕಟ್ಟೆ ಗ್ರಾಮದ ಬೆಂಗಳೂರು ಉದ್ಯಮಿ ಗಿರೀಶ್. ಚೇತನ್ ತುರುಬನಹಳ್ಳಿ. ಪಾಳ್ಯ ರಘು.ರಮೇಶ್ ಹಡೆನಹಳ್ಳಿ. ಪ್ರಕಾಶ್ ಮೇಟಿಮೆಳ್ಳಹಳ್ಳಿ. ಬೆಳ್ಳೂರ ಅಲೀಂ. ಮಂಜುನಾಥ.ಲೋಹಿತ ಬೆಳ್ಳೂರು. ರಾಮಕೃಷ್ಣೇಗೌಡ. ನಾರಾಯಣ. ಹಲವಾರು ಮುಖಂಡರು ಭಾಗವಹಿಸಿದ್ದರು
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ