May 9, 2024

Bhavana Tv

Its Your Channel

ಜಲ ಜೀವನ್ ಮಿಷನ್ ಯೋಜನೆಯ ಗುತ್ತಿಗೆದಾರರ ಅವಾಂತರ; ತಕ್ಷಣವೇ ಸ್ಪಂದಿಸಿದ ಎಇಇ ಶಿವಪ್ರಸಾದ್

ಕೊಡಗು:- ಜಲ ಜೀವನ್ ಮಿಷನ್ ಈ ಯೋಜನೆಯ ಗುತ್ತಿಗೆದಾರರ ಅವಾಂತರದ ಬಗ್ಗೆ ಕರವೇ ಕಾರ್ಯಕರ್ತರು ಮನವಿ ಮಾಡಿದಾಗ ಮನವಿಗೆ ತಕ್ಷಣವೇ ಸ್ಪಂದಿಸಿದ ಸೋಮವಾರಪೇಟೆ ಜಿಲ್ಲಾ ಪಂಚಾಯ್ತಿ ನೀರಾವರಿ ಇಲಾಖೆಯ ಎಇಇ ಶಿವಪ್ರಸಾದ್

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ಸೇರಿದ ನಂದಿಗುAದ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಜಲ ಜೀವನ ಮಿಷನ್ ಯೋಜನೆ ಅನ್ವಯ ಮನೆ ಮನೆಗಳಿಗೆ ನೀರು ಕೊಡಲು ಉದ್ದೇಶಿಸಲಾಗಿತ್ತು. ಆದರೆ ಈ ಯೋಜನೆಯ ಗುತ್ತಿಗೆದಾರರು ನೀರು ಹರಿಯುವ ಚರಂಡಿಗೆ ಮೀಟರ್ ಅಳವಡಿಸಲಾಗಿತ್ತು ಇದನ್ನು ಕರವೇ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು ಮತ್ತು ಮನವಿ ಸಲ್ಲಿಸಲಾಗಿತ್ತು .ಕರವೇ ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಸೋಮವಾರಪೇಟೆ ಜಿಲ್ಲಾ ಪಂಚಾಯತ್ ನೀರಾವರಿ ಇಲಾಖೆಯ ಎಇಇ ಶಿವಪ್ರಸಾದ್ ಬಂದು ಸ್ಥಳ ಪರಿಶೀಲಿಸಿ ಚರಂಡಿ ಯಲ್ಲಿ ಮೀಟರ್ ಅಳವಡಿಸುವ ಬಗ್ಗೆ ಅಪೇಕ್ಷೆ ವ್ಯಕ್ತಪಡಿಸಿದರು .ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಇದನ್ನು ಬೇಗನೆ ಸರಿಪಡಿಸಬೇಕು ಎಂದು ಆದೇಶಿಸಿದರು. ಗುತ್ತಿಗೆದಾರರು ಇದನ್ನು ಒಪ್ಪಿಕೊಂಡು ಬೇಗನೆ ಸರಿಪಡಿಸುವ ಆಶ್ವಾಸನೆ ನೀಡಿದರು ..ಈ ಸಂದರ್ಭದಲ್ಲಿ ಮುಖ್ಯ ಎಂಜಿನಿಯರ್ (ಂಇಇ ) ಶಿವಪ್ರಸಾದ್ ಮತ್ತು ಕರವೇ ಫ್ರಾನ್ಸಿಸ್ ಡಿ ಸೋಜ ರವರು ಮತ್ತು ಗುತ್ತಿಗೆದಾರರಾದ ತ್ರಿಶೂಲ್ ಇದ್ದರು.

error: