ಕೊಡಗು: ಕಾಫಿ ಪಲ್ಪರ್ ನೀರನ್ನು ಹೊಳೆಯ ನೀರಿಗೆ ಬಿಡುತ್ತಿದ್ದಾರೆ ಇದರ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತ ಫ್ರಾನ್ಸಿಸ್ ಡಿಸೋಜಾ ರವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹೊನ್ನವಳ್ಳಿ ಎಂಬ ಗ್ರಾಮದಿಂದ ಈ ಹೊಳೆ ಹರಿದು ಕೂಗೆಕೋಡಿ ಮಾರ್ಗವಾಗಿ ಶುಂಠಿ ಮತ್ತು ಅಜ್ಜಳ್ಳಿ ಕೋಟೆ ಮತ್ತು ಬಸವನಕೊಪ್ಪ ಮತ್ತು ಶಾಂತವೇರಿ ಮಾರ್ಗವಾಗಿ ಶನಿವಾರ ಸಂತೆಯಿAದ ಗೊರೂರು ಡ್ಯಾಮಿಗೆ ಈ ನೀರು ಸೇರುತ್ತದೆ .ನಿನ್ನೆ ದಿನ ಈ ಹೊಳೆಗೆ ಕಾಫಿ ಪಲ್ಪಿಂಗ್ ನೀರನ್ನು ಬಿಟ್ಟಿರುತ್ತಾರೆ .ಈ ಹೊಳೆಯಲ್ಲಿ ವ್ಯವಸಾಯಕ್ಕೆ ಅತಿ ಹೆಚ್ಚು ನೀರು ಬಳಸುತ್ತಾರೆ ಮತ್ತು ಈ ಹೊಳೆಯಲ್ಲಿ ಅತಿಹೆಚ್ಚು ಜಲಚರ ಪ್ರಾಣಿಗಳು ಇದೆ ಮತ್ತು ಈ ಹೊಳೆಯ ನೀರನ್ನು ದನಕರುಗಳು ಕುಡಿಯುತ್ತವೆ .ಹಾಗಾಗಿ ಕಾಫಿ ಪಲ್ಪಿಂಗ್ ನೀರಿನಿಂದ ವ್ಯವಸಾಯಕ್ಕೂ ತೊಂದರೆಯಾಗುತ್ತಿದ್ದು ಮತ್ತು ದನಕರುಗಳು ಕುಡಿದರೆ ತುಂಬಾ ತೊಂದರೆ ಉಂಟಾಗುತ್ತದೆ ಹಾಗೂ ಜಲಚರ ಪ್ರಾಣಿಗಳು ಸತ್ತು ಹೋಗುತ್ತದೆ ಹಾಗಾಗಿ ಸಂಬAಧಪಟ್ಟ ಅಧಿಕಾರಿಗಳು ಈ ಹೊಳೆಗೆ ಯಾರು ಕಾಫಿ ಪಲ್ಪರ್ ನೀರು ಬಿಟ್ಟಿರುತ್ತಾರೆ ಅವರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು .ಮತ್ತು ಹೊಳೆಯ ಬದಿಯಲ್ಲಿ ಯಾವ ಕಾಫಿ ಪಲ್ಪರ್ ಇದೆಯೋ ಇದನ್ನು ಪರಿಶೀಲನೆ ಮಾಡಬೇಕು ಎಂದು ಕರವೇ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರಾದ ನವೀನ್ ಕುಮಾರ್ ಅವರು ಮಾತನಾಡಿ ಈ ಹೊಳೆಯಿಂದ ವ್ಯವಸಾಯಕ್ಕೆ ಅತಿ ಹೆಚ್ಚು ಉಪಯುಕ್ತವಾಗುತ್ತದೆ ಹಾಗೂ ಇದರಲ್ಲಿ ತುಂಬಾ ಜಲಚರ ಪ್ರಾಣಿ ಇದ್ದು ಮತ್ತು ಈ ನೀರನ್ನು ದನಕರುಗಳು ಹೆಚ್ಚು ಕುಡಿಯುತ್ತಿದ್ದು ಇದಕ್ಕೆಲ್ಲಾ ತೊಂದರೆಯಾಗುತ್ತಿದೆ ಹಾಗಾಗಿ ಹೊಳೆಗೆ ಯಾರೂ ಕಾಫಿ ಪಲ್ಪರ್ ನೀರನ್ನು ಬಿಟ್ಟಿರುತ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದರು.
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ