May 3, 2024

Bhavana Tv

Its Your Channel

ಕೃಷ್ಣ ನಗರಿಯಲ್ಲಿ ಕರೋನಾ ನರ್ತನ: 121 ಸೊಂಕಿತರು ಒಂದೇ ದಿನ ಪತ್ತೆ

ಉಡುಪಿ; ಜಿಲ್ಲೆಯಲ್ಲಿ ಇಂದು ಕೂಡ ಒಂದೇ ದಿನ ಕೊರೊನಾ ವೈರಸ್ ಪ್ರಕರಣ ಶತಕ ದಾಟಿದೆ. ಆ ಮೂಲಕ ಕಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889 ಕ್ಕೆ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ ಇಂದು ದಾಖಲಾದ ಒಟ್ಟು ಪಾಸಿಟಿವ್ ಪ್ರಕರಣಗಳು 121 ಆಗಿದೆ. ಈ ಎಲ್ಲಾ ಸೋಂಕಿತರೂ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ನಲ್ಲಿದ್ದವರು. ನಿನ್ನೆ ೨೦೪ ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ಒಟ್ಟು ೨೦೦೦ ಕ್ಕಿಂತ ಹೆಚ್ಚು ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಜಿಲ್ಲೆಯಲ್ಲಿ ಇದೀಗ ಒಟ್ಟು ಸೋಂಕಿತರ ಸಂಖ್ಯೆ 889 ಆಗಿದೆ. ಈ ಪೈಕಿ ಮುಂಬೈನಿoದ ಬಂದವರು ೮೫೩ ಜನರಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ, ಕಾರ್ಕಳ ಮತ್ತು ಕೊಲ್ಲೂರಿನಲ್ಲಿ ತಲಾ ಒಂದೊoದು ಕೋವಿಡ್ ಆಸ್ಪತ್ರೆಯನ್ನು ತೆರೆಯಲಾಗಿದೆ. ಒಟ್ಟು ಸೊಂಕಿತರ ಸಂಖ್ಯೆ 889 ಆಗಿದ್ದು, ಸಕ್ರೀಯ ಪ್ರಕರಣ 785 ಆಗಿದೆ ಒಟ್ಟು 103 ಜನರು ಕರೋನಾದಿಂದ ಗುಣಮುಖರಾಗಿದ್ದು ಒರ್ವರು ಮರಣ ಹೊಂದಿದ್ದಾರೆ.

error: