ಬೈಂದೂರು : ಪಾಂಚಜನ್ಯ ಕ್ರೀಡಾ ಸಂಘ ಪಡುವರಿ ಇವರ ಆಶ್ರಯದಲ್ಲಿ ಶ್ರೀನಿಧಿ ಮಹಿಳಾ ಕುಣಿತ ಭಜನಾ ತಂಡ ಬೈಂದೂರು, ಕೇಸರಿ ದಳ ತಂಡ, ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಇವರ ಸಹಯೋಗದಲ್ಲಿ ನಮ್ಮ ಪಡುವರಿ ಸ್ವಚ್ಛ ಪಡುವರಿ ಇದರ ಎರಡನೇ ಹೆಜ್ಜೆ ಬೈಂದೂರು ಸೋಮೇಶ್ವರ ಕಡಲ ಕಿನಾರೆಯ ಸ್ವಚ್ಛತಾ ಅಭಿಯಾನ ಕ್ಲೀನ್ ಕಿನಾರ ಕಾರ್ಯಕ್ರಮ ಭಾನುವಾರ ನಡೆಯಿತು.
ಪಡುವರಿ ಪಾಂಚಜನ್ಯ ಕ್ರೀಡಾ ಸಂಘದ ವತಿಯಿಂದ ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಅಭಿನಂದಿಸಿ ಗೌರವಿಸಿದ್ದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಸ್ವಚ್ಛತೆಯನ್ನು ಪ್ರತಿಯೊಬ್ಬರು ತಮ್ಮ ಪರಿಸರ, ಕಡಲ ಕಿನಾರೆಗಳಲ್ಲಿ ಸ್ವಚ್ಛಗೊಳಿಸುವ ಮೂಲಕ ಇಡೀ ಊರೇ ಸ್ವಚ್ಛವಾಗಿರುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಗಳಿ ಅಗತ್ಯ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ಭಾನುವಾರ ಕೂಡ ಕಿನಾರೆ ಸ್ವಚ್ಛತಾ ಕಾರ್ಯವನ್ನು ಆಯೋಚಿಸಿ, ನಾನು ಕೂಡ ಭಾಗಿಯಾಗುತ್ತೇನೆ. ನಮ್ಮ ಸ್ವಚ್ಛತಾ ಕಾರ್ಯದಿಂದ ಇಲ್ಲಿ ಕಸವನ್ನು ಹಾಕುವವರ ಸಂಖ್ಯೆ ಕೂಡಾ ಕಡಿಮೆಯಾಗುತ್ತದೆ. ನಿಮ್ಮ ಸ್ವಚ್ಛತಾ ಕಾರ್ಯದಲ್ಲಿ ಚಿಕ್ಕ ಮಕ್ಕಳು ಭಾಗವಹಿಸಿದ್ದು ಬಹಳ ಶ್ಲಾಘನೀಯ ಎಂದರು.
ಕಸಗಳನ್ನು ಸಮುದ್ರ ತೀರದಲ್ಲಿ ಸಂಗ್ರಹಿಸಿ ಬೈಂದೂರು ಪಟ್ಟಣ ಪಂಚಾಯತ್ ತ್ಯಾಜ್ಯಾ ವಿಲೇವಾರಿ ವಾಹನದಲ್ಲಿ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು. ೫೦ ಕ್ಕೂ ಅಧಿಕ ಮಂದಿ ಕಿನಾರೆ ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು.
ವರದಿ : ಎಚ್ ಸುಶಾಂತ್ ಬೈಂದೂರು
More Stories
ಮಕ್ಕಳಿಗಾಗಿ ಸಿದ್ಧ ಸಮಾಧಿ ಯೋಗ ಸಂಸ್ಕಾರ ಶಿಬಿರ ಮತ್ತು ಗಾಂಧಾರಿ ವಿದ್ಯೆ.
ಸೈಬರ್ ಜಾಗ್ರತಿ ಕಾರ್ಯಾಗಾರ
ಯು. ರಾಘವೇಂದ್ರ ಹೊಳ್ಳ ಅವರಿಗೆ ಬೀಳ್ಕೋಡಿಗೆ ಸಮಾರಂಭ