April 26, 2024

Bhavana Tv

Its Your Channel

ಉಚಿತ ಲೇಖನ ಸಾಮಗ್ರಿ ವಿತರಣೆ

ಕಾರ್ಕಳ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡಿಬೆಟ್ಟು ಶಾಲಾ ವಿದ್ಯಾಭಿಮಾನಿಗಳಿಂದ ವಿದ್ಯಾರ್ಥಿಗಳಿಗೆ ಉಚಿತ ಲೇಖನ ಸಾಮಗ್ರಿ ವಿತರಣೆ ನೆರವೇರಿತು.

ಶಾಲಾ ಹಿತೈಷಿಗಳಾಗಿರುವ ಕೊಡುಗೈ ದಾನಿಗಳಾದ ಸತೀಶ್ ಜೈನ್, ಧರಣೇಂದ್ರ ಜೈನ್, ಶ್ರೀ ದಯಾನಂದ ನಾಯಕ್, ಶ್ರೀ ಸತೀಶ್ ನಾಯಕ್ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದು ಲೇಖನ ಸಾಮಗ್ರಿ ಗಳನ್ನು ವಿತರಿಸಿ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಶುಭ ಹಾರೈಸಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸೀಮಾ ಹೆಗಡೆ ಯವರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದು ಪೋಷಕರಿಗೆ ಮಕ್ಕಳ ಕಲಿಕೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ,ಕಲಿಕೆಯ ನಿರಂತರತೆ ಯನ್ನು ಕಾಪಾಡಬೇಕು ಎಂಬ ಕಿವಿಮಾತಿನೊಂದಿಗೆ ಶುಭ ಹಾರೈಸಿದರು. ಎಸ್,ಡಿ,ಎಂ,ಸಿ ಉಪಾಧ್ಯಕ್ಷೆ ಸರೋಜಿನಿ ಯವರು ಕೊಡುಗೆ ನೀಡಿದ ದಾನಿಗಳ ಸಹಕಾರ ವನ್ನು ಸ್ಮರಿಸಿದರು.

ಶಿಕ್ಷಕರಾದ ನಿತ್ಯಾನಂದ ನಾಯಕ್‌ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಸುರೇಶ್ ಪೂಜಾರಿ ಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪೋಷಕರು ಹಾಗೂ ಊರ ವಿದ್ಯಾಭಿಮಾನಿಗಳು ಭಾಗವಹಿಸಿ ಸಹಕರಿಸಿದರು.

ವರದಿ: ಅರುಣ ಭಟ್ಟ ಕಾರ್ಕಳ

error: