May 21, 2024

Bhavana Tv

Its Your Channel

ಎಲ್.ಐ. ಸಿ ಆಪ್ ಇಂಡಿಯಾ ವತಿಯಿಂದ ವಿಜೇತ ವಿಶೇಷ ಶಾಲೆಗೆ ಶಾಲಾ ವಾಹನ ಹಸ್ತಾಂತರ.

ಕಾರ್ಕಳ: ಇಂದು ಎಲ್.ಐ. ಸಿ ಆಪ್ ಇಂಡಿಯಾ-ಗೋಲ್ಡನ್ ಜುಬಿಲಿ ಫೌಂಡೇಶನ್ ವತಿಯಿಂದ ವಿಜೇತ ವಿಶೇಷ ಶಾಲೆಗೆ ೨೪*೭ ಸೀಟರ್ ಸೌಲಭ್ಯದ ೨೦ ಲಕ್ಷ ಮೌಲ್ಯದ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮವನ್ನು ಸೀನಿಯರ್ ಡಿವಿಜನಲ್ ಮ್ಯಾನೇಜರ್ ಬಿಂದು ರೋಬರ್ಟ್ ಅವರು ದೀಪ ಪ್ರಜ್ವಲಿಸಿ,ಶಾಲಾ ವಾಹನ ಕೀ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ನೆರವೇರಿಸಿದರು.
ಎಪಿಎಂಸಿ ಅಧ್ಯಕ್ಷರು ಹಾಗೂ ಶಾಲಾ ಅಧ್ಯಕ್ಷರಾದ ರತ್ನಾಕರ್ ಅಮೀನ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಎನ್. ರಮೇಶ್ ಭಟ್ ಮಾರ್ಕೆಟಿಂಗ್ ಮ್ಯಾನೇಜರ್, ಮೊಯ್ದಿನ್ ಪಿ.ಕೆ.ಚೀಫ್ ಮ್ಯಾನೇಜರ್, ಕೆ.ಸದಾಶಿವ ಮ್ಯಾನೇಜರ್ ಸೇಲ್ಸ್, ಶ್ರೀ ಎ. ಮೋಹನ್ ದಾಸ್, ಮ್ಯಾನೇಜರ್ ಇ ಡಿ ಎಂ ಎಸ್,ಶ್ರೀ ಯಜ್ಞೆಶ್ ಸಿ ಎಚ್,ಅಸಿಸ್ಟೆಂಟ್ ಬ್ರ‍್ಯಾನ್ಚ್ ಮ್ಯಾನೇಜರ್ ಸೇಲ್ಸ್, ಉಪಸ್ಥಿತರಿದ್ದರು.
ವಿಜೇತ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ , ಶಾಲಾ ಕಾರ್ಯದರ್ಶಿ ಹರೀಶ್, ಕೋಶಾಧಿಕಾರಿ ಸಿಯಾ ಸಂತೋಷ್ ನಾಯಕ್, ಟ್ರಸ್ಟಿ ಕಿರಣ್ ಶೆಟ್ಟಿ, ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರಾದ ಕೆ. ರಾಧಾಕೃಷ್ಣ ಶೆಟ್ಟಿ, ಜನಪ್ರಿಯ ರೈಸ್ ಮಿಲ್ ಮಾಲಕರಾದ ಮಂಜುನಾಥ ಪೂಜಾರಿ, ಕ.ರಾ.ವಿಶೇಷ ಶಿಕ್ಷಕರ ಸಂಘದ ಗೌರವಾಧ್ಯಕ್ಷೆ ಅಗ್ನೇಸ್ ಕುಂದರ್, ಶಾಲಾ ಹಿತೈಷಿಗಳಾದ ರತ್ನಾಕರ್ ಶೆಟ್ಟಿ ಎಣ್ಣೆಹೊಳೆ, ಮಕ್ಕಳು ,ಹೆತ್ತವರು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಶ್ರೀಮತಿ ಹರ್ಷಿತಾ ಕಿರಣ್ಕಾರ್ಯಕ್ರಮ ನಿರೂಪಿಸಿ, ಡಾ. ಕಾಂತಿ ಹರೀಶ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರವೇರಿಸಿ, ವಿಶೇಷ ಶಿಕ್ಷಕಿ ಕು.ಶ್ರುತಿ ವಂದಿಸಿದರು.
ವರದಿ: ಅರುಣ ಭಟ್ ಕಾರ್ಕಳ

error: