April 26, 2024

Bhavana Tv

Its Your Channel

ಗೋ ಕಳ್ಳತನ, ಗೋ ಹತ್ಯೆ ಪ್ರಕರಣದಲ್ಲಿ ಬಾಗಿಯಾದ ಆರೋಪಿಗಳ ಪರೇಡ್

ಕಾರ್ಕಳ ನಗರ ಠಾಣೆಯ ಆವರಣದಲ್ಲಿ ಕಾರ್ಕಳ ಉಪ ವಿಭಾಗ ವ್ಯಾಪ್ತಿಯಲ್ಲಿ ಇದುವರೆಗೆ ಗೋ ಕಳ್ಳತನ,ಗೋ ಹತ್ಯೆ ಪ್ರಕರಣದಲ್ಲಿ ಬಾಗಿಯಾದ ಆರೋಪಿಗಳನ್ನು ಹಾಗೂ ದನದ ದಲ್ಲಾಳಿ ಮಾಡುವವರನ್ನು ಮತ್ತು ದನಸಾಗಾಟ ಮಾಡುವ ವಾಹನಚಾಲಕರ ಪರೇಡ್ ನಡೆಸಲಾಯಿತು

ಇವರುಗಳು ಮುಂದಕ್ಕೆ ಯಾವುದೇ ಗೋ ಕಳ್ಳತನ ಗೋ ಹತ್ಯೆ . ಪ್ರಕರಣದಲ್ಲಿ ಬಾಗಿಯಾಗದಂತೆ ಇನ್ನು ಮುಂದಕ್ಕೆ ಪ್ರಕರಣದಲ್ಲಿ ಬಾಗಿಯಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣು ವರ್ದನ್ ರವರು ಎಚ್ಚರಿಕೆಯನ್ನು ನೀಡಿರುತ್ತಾರೆ. ಸಭೆಯಲ್ಲಿ ಪೊಲೀಸ್ ಉಪಾದೀಕ್ಷರಾದ ಎಸ್ ವಿಜಯಪ್ರಸಾದ್. ಕಾರ್ಕಳ ವೃತ್ತ ನಿರೀಕ್ಷಕರಾದ ಸಂಪತ್ ಕುಮಾರ್ ಕಾಪು ವೃತ್ತ ನಿರೀಕ್ಷಕರಾದ ಪ್ರಕಾಶ್. ಹಾಗೂ ಕಾರ್ಕಳ ನಗರ,ಗ್ರಾಮಾಂತರ, ಹೆಬ್ರಿ, ಅಜೆಕಾರು, ಶಿರ್ವ, ಕಾಪು, ಪಡುಬಿದ್ರೆ ಠಾಣೆಯ ಪಿಎಸ್‌ಐ ರವರುಗಳು ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: