May 18, 2024

Bhavana Tv

Its Your Channel

ತುಳುನಾಡಿನ ನೆಲದಲ್ಲಿ ಕನ್ನಡ ವೃಕ್ಷದ ಬೇರು, ಚಿಗುರುಗಳು ಕುರಿತು ಒಂದು ದಿನದ ವಿಚಾರ ಸಂಕೀರ್ಣ

ಕಾರ್ಕಳ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಮ್ಮ ತುಳುವೆರ್ ಕಲಾಸಂಘಟನೆ ( ರಿ) ನಾಟ್ಕ ದೂರು,ಮುದ್ರಾಡಿ , ದಿನಾಂಕ ೧೩/೧೧/೨೦೨೧ನೆಯ ಶನಿವಾರದಂದು ಸಮಯ ಬೆಳಿಗ್ಗೆ ೯.೩೦ರಿಂದ ೧೦.೩೦ ರ ವರೆಗೆ ನಡೆಯಲಿರುವ ,ತುಳುನಾಡಿನ ನೆಲದಲ್ಲಿ ಕನ್ನಡ ವೃಕ್ಷದ ಬೇರು, ಚಿಗುರುಗಳು ಕುರಿತು ಒಂದು ದಿನದ ವಿಚಾರ ಸಂಕೀರ್ಣ ಮತ್ತು ಅವ್ವ ನನ್ನ ಅವ್ವ ನಾಟಕದ ಪ್ರದರ್ಶನ ಇದೇ ಬರುವ ಹದಿಮೂರನೆಯ ತಾರೀಕಿ ನಂದು ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾಂಗಣದಲ್ಲಿ ನಡೆಯಲಿದೆ

ಈ ವಿಚಾರ ಸಂಕೀರ್ಣದ ಉದ್ಘಾಟನೆಯನ್ನ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ಮೋಹನ್ ಆಳ್ವಾರವರು ಉದ್ಘಾಟನೆಯನ್ನು ನಿರ್ವಹಿಸಲಿದ್ದಾರೆ, ಸಭಾಧ್ಯಕ್ಷತೆಯನ್ನು ಶ್ರೀ ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ. ಎ.ಶಿವಾನಂದ ಪೈ ಯವರು ನಿರ್ವಹಿಸಲಿದ್ದಾರೆ,ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಮಂಗಳೂರು ವಿಶ್ವವಿದ್ಯಾಲಯ ದ ಕನ್ನಡ ಪ್ರಾಧ್ಯಾಪಕರಾದ ಮಾಧವ್ ಎಂ.ಕೆ. ಯವ ರು ಅತಿಥಿಗಳಾಗಿದ್ದರೆ,ಎಂದು ಕಾರ್ಯಕ್ರಮ ಡ ಕುರಿತು ಪತ್ರಿಕಾಗೋಷ್ಠಿ ಯಲ್ಲಿ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಎ. ಕೋಟ್ಯಾನ್ ರವರು ತಿಳಿಸಿದರು.

ವರದಿ:ಅರುಣ ಭಟ್ ಕಾರ್ಕಳ

error: