May 4, 2024

Bhavana Tv

Its Your Channel

ಡಿಸೆಂಬರ್ ೧೨ರಂದು ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ

ಕಾರ್ಕಳ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಕಳ ತಂಡದ ವತಿಯಿಂದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮವು ಇದೇ ತಿಂಗಳು ೧೨ರಂದು ಗಾಂಧಿ ಮೈದಾನದಲ್ಲಿ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಹಿಂದೂ ಬಾಂಧವರು ಭಾಗವಹಿಸಿ ಹಿಂದೂ ಸಮಾಜದ ನಿರ್ಮಾಣ ಮಾಡು ಉದ್ದೇಶದೊಂದಿಗೆ ಮತ್ತು ದತ್ತಾತ್ರೇಯ ದೇವರ ಪವಿತ್ರ ಕ್ಷೇತ್ರವಾಗಿರುವ ದತ್ತಪೀಠ ಒಂದು ಹಿಂದುಗಳ ತೀರ್ಥಕ್ಷೇತ್ರ ಆಗಬೇಕು ಎಂದು ಬಜರಂಗದಳದ ಕಾರ್ಕಳ ಸಂಚಾಲಕರಾದ ಸುನಿಲ್ K R ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಸ್ವಾಧಿ ಸರಸ್ವತಿ ಮುಖ್ಯ ಭಾಷಣ ಮಾಡಲಿದ್ದಾರೆ ಪೇಜಾವರ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆನೆಗುಂದಿ ಮಹಾ ಸಂಸ್ಥಾನದ ಕಾಳಹಸ್ತೇಂದ್ರ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ ಎಂದು ಹೇಳಿದರು.

ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್ ಮಾತನಾಡಿ ಈ ಕಾರ್ಯಕ್ರಮದಲ್ಲಿ ಸುಮಾರು ಹದಿನೈದು ಸಾವಿರ ಜನ ಸೇರಲಿದ್ದಾರೆ. ಈ ಸಮಾರಂಭದಲ್ಲಿ ಕೋರೋನಾ ಲಸಿಕೆ ಕೊಡುವ ಕಾರ್ಯಕ್ರಮದ ಹಾಕಿಕೊಂಡಿದೆ ಎಂದು ಹೇಳಿದರು..

ವರದಿ: ಅರುಣ ಭಟ್ ಕಾರ್ಕಳ

error: