May 19, 2024

Bhavana Tv

Its Your Channel

ಕಾರ್ಕಳ; ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಮಾಹಿತಿ ಕಾರ್ಯಕ್ರಮ

ಕಾರ್ಕಳ: ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಮಾಹಿತಿ ಕಾರ್ಯಕ್ರಮ ಇಂದು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಕ್ಟರ್ ಸುಬ್ರಮಣ್ಯ ರಾವ್ ಆಡಳಿತ ವೈದ್ಯಾಧಿಕಾರಿಯವರು ನೆರವೇರಿಸಿದರು. ಆರೋಗ್ಯ ಮಿತ್ರ ಕೀರ್ತನಾ ಆಯುಸ್ಮಾನ್ ಭಾರತ ಯೋಜನೆಯ ಬಗ್ಗೆ ಪ್ರಾಸ್ತಾವಿಕ ಮಾಹಿತಿ ನೀಡಿದರು.ಡಾಕ್ಟರ್ ಶಶಾಂಕ್ ಹಾಗೂ ಡಾಕ್ಟರ್ ಅನಂತ ಕಾಮತ್ ಕ್ಯಾನ್ಸರ್ ಸಪ್ತಾಹದ ಅಮೂಲ್ಯ ಮಾಹಿತಿ ನೀಡಿದರು.ಡಾಕ್ಟರ್ ಸುಬ್ರಮಣ್ಯ ರಾವ್ ಹಾಗೂ ಡಾಕ್ಟರ್ ಉದಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್.ಸಿ.ಡಿ.ಸಲಹೆಗಾರರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: