May 2, 2024

Bhavana Tv

Its Your Channel

ಪರಿಸರ ದಿನಾಚರಣೆಯ ಅಂಗವಾಗಿ ಬೊಂಬೆಯಾಟದ ಪ್ರದರ್ಶನ

ಕಾರ್ಕಳ: ಭಾರತ್ ಸ್ಕೌಟ್ ಆಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿ,ಸ್ಥಳೀಯ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಗೈಡ್ ಮಕ್ಕಳು ಪರಿಸರ ದಿನಾಚರಣೆಯ ಅಂಗವಾಗಿ ಬೊಂಬೆಯಾಟದ ಪ್ರದರ್ಶನವನ್ನು ಮಾಡಿದರು. ವಿವಿಧ ಬಟ್ಟೆಯ ಬೊಂಬೆಗಳನ್ನು ತಯಾರಿಸಿ,ಪರಿಸರವನ್ನು ಉಳಿಸಿ ಬೆಳೆಸುವ ಬಗ್ಗೆ ಜಾಗೃತಿಯನ್ನು ಮೂಡಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಗೈಡ್ ಕಮಿಷನರ್ ಜ್ಯೋತಿ ಜೆ ಪೈ ಹಾಗೂ ಸಹಾಯಕ ಜಿಲ್ಲಾ ಗೈಡ್ ಕಮಿಷನರ್ ಬೋಳ ಗೀತ ಕಾಮತ್ ಇವರು ,ಮಕ್ಕಳ ಹೊಸ ಪ್ರಯತ್ನವನ್ನು ಶ್ಲಾಘಿಸಿದರು.
.ಸಂಸ್ಥೆಯ ತಾಲೂಕು ಕಾರ್ಯದರ್ಶಿಗಳಾದ ಗಣೇಶ್ ಜಾಲಸೂರ್ ಉಪಸ್ಥಿತರಿದ್ದರು.
ಸ್ಕೌಟರ್ ಸುಜಾತಾ ಹೆಗ್ಡೆ ನಿರೂಪಿಸಿದರು. ಶಿಕ್ಷಕಿ ಸವಿತಾ ಸ್ವಾಗತಿಸಿ,ವಂದಿಸಿದರು.ಮಕ್ಕಳನ್ನು ತರಬೇತುಗೊಳಿಸಿದ ಗೈಡರ್ ಸೀಮಾ ಕಾಮತ್ ಅವರು ಪ್ರಸ್ತಾವನೆಗೈದರು.

ವರದಿ: ಅರುಣ ಭಟ್

error: