April 25, 2024

Bhavana Tv

Its Your Channel

ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಮನೆಗೆ ಹಾನಿ

ಕಾರ್ಕಳ ಕುಕ್ಕುಂದೂರು ಗ್ರಾಮದ ಹಂಚಿ ಕಟ್ಟೆ ಬಳಿ ಸೈಯದ್ ತಾಹಿರ್ ಎಂಬವರ ಹಂಚಿನ ಮನೆ ಮೇಲೆ ನೆನ್ನೆ ರಾತ್ರಿ ಬೀಸಿದ ಗಾಳಿಗೆ ತೆಂಗಿನ ಮರ ಬಿದ್ದು ಭಾಗಶಃ ಮನೆ ಹಾನಿ ಉಂಟಾಗಿದೆ. ಸುಮಾರು 40 ಸಾವಿರ ದ ವರೆಗೆ ಮನೆಗೆ ನಷ್ಟ ಉಂಟಾಗಿದೆ. ಮನೆಮಾಡಿನ ಕೆಲವು ಪಕ್ಕಾಸುಗಳು ಹಂಚುಗಳು ಮುರಿದಿದ್ದು ಗೋಡೆಗಳು ಬಿರುಕು ಬಿಟ್ಟಿವೆ. ಕಂದಾಯ ಇಲಾಖೆ ಅಧಿಕಾರಿಗಳು ಮನೆಯ ಮಹಜರು ಮಾಡಿ ಆದಷ್ಟು ಬೇಗ ಪರಿಹಾರ ತೆಗೆಸಿಕೊಡುವ ಭರವಸೆ ಯನ್ನು ನೀಡಿರುತ್ತಾರೆ.

ವರದಿ:ಅರುಣ ಭಟ್ ಕಾರ್ಕಳ

error: