April 27, 2024

Bhavana Tv

Its Your Channel

ಅಮೃತಮಹೋತ್ಸವದ ಪ್ರಯುಕ್ತ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ಬೆಡ್ ಶೀಟ್ ವಿತರಣೆ

ಕಾರ್ಕಳ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ಕಾರ್ಕಳ ಶಾಖೆ ವತಿಯಿಂದ ಅಮೃತಮಹೋತ್ಸವದ ಪ್ರಯುಕ್ತ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ಬೆಡ್ ಶೀಟ್ & ತಿನಸು ವಸ್ತುಗಳನ್ನು ಹಸ್ತಾಂತರಿಸಿದರು.

ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ಕಾರ್ಕಳ ಶಾಖೆ ವತಿಯಿಂದ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ಬೆಡ್ ಶೀಟ್ ಮತ್ತು ತಿನಸು ವಸ್ತುಗಳನ್ನು ಎಲ್.ಐ ಸಿ ಕಾರ್ಕಳ ಶಾಖೆಯ ಮುಖ್ಯ ಪ್ರಭಂದಕರು ಮೊಯ್ದಿನ್ ಹಸ್ತಾಂತರಿಸಿದರು.
ಸಂಸ್ಥಾಪಕಿ ಕಾಂತಿ ಮಾತನಾಡಿ ಜಾರ್ಜ್ ಫೆರ್ನಾಂಡಿಸ್ ಅವರ ಮಾರ್ಗದರ್ಶನದಂತೆ ಸೈಂಟ್ ಮಿಲಾಗ್ರೀಸ್ ಕಾರ್ಕಳ ಶಾಖೆ ಕಳೆದ ಹಲವಾರು ವರುಷಗಳಿಂದ ಈ ರೀತಿಯ ಶಾಲೆಗಳಿಗೆ ಆಗತ್ಯ ವಸ್ತುಗಳನ್ನು ನೀಡುತ್ತಾ ಬಂದಿದ್ದು ಈ ವರುಷ ನಮ್ಮ ಸಂಸ್ಥೆಗೆ ನೀಡಿದ್ದು ತುಂಬಾ ಸಂತೋಷದಾಯಕವಾಗಿದೆ ಸೈಂಟ್ ಮಿಲಾಗ್ರೀಸ್ ಸಂಸ್ಥೆ ದೇಶ ವಿದೇಶದಲ್ಲಿ ಪಸರಿಸಲಿ ಎಂದು ಹಿತ ವಚನ ನುಡಿದರು.
ಎಲ್.ಐ ಸಿ ಸೇಲ್ಸ್ ಮ್ಯಾನೇಜರ್ ಪ್ರಸಾದ್ ಮಾತನಾಡಿ ಸಂಸ್ಥೆಯು ಶಾಖೆ ಮಾಡುವ ಇನ್ನಿತರ ಕಾರ್ಯಕ್ರಮಗಳನ್ನು ಪ್ರಶಂಸಿದರು.

ಈ ಸಂದರ್ಭದಲ್ಲಿ ಎಲ್.ಐ ಸಿ ಕಾರ್ಕಳ ಶಾಖೆಯ ಮುಖ್ಯ ಪ್ರಭಂದಕರು ಮೊಯ್ದಿನ್, ವಿ 4 ರಿಪೋರ್ಟರ್ ಕೆ. ಎಂ. ಖಲೀಲ್ ,ಸೇಲ್ಸ್ ಮ್ಯಾನೇಜರ್ ಪ್ರಸಾದ್, ಸೇಂಟ್ ಮಿಲಾಗ್ರೆಸ್ ಕೋಪರೇಟಿವ್ ಸೊಸೈಟಿ ಬ್ರಾಂಚ್ ಮ್ಯಾನೇಜರ್ ಟೆಲ್ವಿನ್, ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ಶ್ರೀ ಕಿಶೋರ್, ಹಾಗೂ ಸಿಬ್ಬಂದಿ ಸುಹಾಸ್ ,ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: