May 4, 2024

Bhavana Tv

Its Your Channel

ಜನವರಿ 22 ರಿಂದ 26 ರವರೆಗೆ ಅತ್ತೂರು ಬಸಿಲಿಕ ಸಂತ ಲಾರೆನ್ಸ್ ಚರ್ಚ್ ನ ಜಾತ್ರಾ ಮಹೋತ್ಸವ

ಕಾರ್ಕಳ: ಅತ್ತೂರು ಬಸಿಲಿಕ ಸಂತ ಲಾರೆನ್ಸ್ ಚರ್ಚ್ ನ ಜಾತ್ರಾ ಮಹೋತ್ಸವ ದಿನಾಂಕ ಜನವರಿ 22 ರಿಂದ 26ರ ತನಕ ನಡೆಯಲಿದ್ದು ಈ ಪ್ರಯುಕ್ತ ನಿಟ್ಟೆ ಪಂಚಾಯತ್ ವತಿಯಿಂದ ಆಯೋಜಿಸಿದ ಪೂರ್ವಭಾವಿ ಸಭೆ ಅತ್ತೂರು ಇಗರ್ಜಿಯ ಸೌಹಾರ್ದ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು.

ವಾಹನ ಪಾರ್ಕಿಂಗ್, ವ್ಯವಸ್ಥೆ, ಆಂಬುಲೆನ್ಸ್ ಸೇವೆ, ಸಿ.ಸಿ ಕ್ಯಾಮರಗಳ ಅಳವಡಿಕೆ ಮತ್ತು ಇನ್ನಿತರ ವ್ಯವಸ್ಥೆ ಗಳ ಕುರಿತು ಅಧಿಕಾರಿಗಳು ಪಂಚಾಯತ್ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.ನಂತರ ಮಾತನಾಡಿದ ಕಾರ್ಕಳ ಪೊಲೀಸ್ ಪಿ.ಎಸ್. ಐ ತೇಜಸ್ವಿ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿ ಸೇರುವ ಜಾತ್ರೆಯಲ್ಲಿ ಸುರಕ್ಷತೆಗಾಗಿ ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು, ವಾಹನ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆ ಇನ್ನಿತರ ವಿಷಯ ಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ನಿಟ್ಟೆ ಪಂಚಾಯತ್ ಅಧ್ಯಕ್ಷ ರು ಸತೀಶ್, ಉಪಾಧ್ಯಕ್ಷೆ ಸುಮಿತ್ರಾ,ಅತ್ತೂರು ಚರ್ಚ್ ನ ಧರ್ಮ ಗುರುಗಳಾದ ವಂದನೀಯ ರೆವರೆಂಡ್ ಫಾದರ್ ಅಲ್ಬನ್ ಡಿ.ಸೋಜ,ಫಾದರ್ ಅಶ್ವಿನ್ ರೆಬೆಲ್ಲೊ,ಮತ್ತು ಚರ್ಚ್ ನ ಪಾಲನಾ ಮಂಡಳಿಯ ವೈಸ್ ಪ್ರೆಸಿಡೆಂಟ್ ಸಂತೋಷ್ ಡಿ.ಸಿಲ್ವಾ , ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಕೆ. ಗೋಪಾಲ್ ಶೆಟ್ಟಿ, ಅಗ್ನಿಶಾಮಕ ದಳದ ಬಿ. ಎಂ. ಸಂಜೀವ, ಮೆಸ್ಕಾಂ ಇಲಾಖೆ ಯ ರಾಜು.ಪಿ.ಜೆ. ಮೇಲ್ವಿಚಾರಕರು ಮತ್ತು ಪೊಲೀಸ್ ಇಲಾಖೆಯ ಏ. ಎಸ್.ಐ,ತೇಜಸ್ವಿ ಪಂಚಾಯತ್ ಸದಸ್ಯರು ಮುಂತಾದವರು ಸಭೆಯಲ್ಲಿ ಭಾಗವಹಿಸಿದರು. .ನಿಟ್ಟೆ ಪಂಚಾಯತ್ ಅಧಿಕಾರಿ ಶೇಖರ್ ಪೂಜಾರಿ ಪಂಚಾಯತ್ ಸದಸ್ಯ ರು ಮುಂತಾದವರು ಉಪಸ್ಥಿತರಿದ್ದರು

ವರದಿ: ಅರುಣ ಭಟ್ ಕಾರ್ಕಳ

error: