May 5, 2024

Bhavana Tv

Its Your Channel

ಗುಡ್ಡೆ ಗುಳಿಗ ದೈವಸ್ಥಾನ ಕುಕ್ಕುಂದೂರಿನಲ್ಲಿ ನಡೆದ ಗುಳಿಗ ದೈವದ ಕೋಲ ನೇಮೋತ್ಸವ

ಕಾರ್ಕಳ ತಾಲೂಕು ಗುಡ್ಡೆ ಗುಳಿಗ ದೈವಸ್ಥಾನ ಕುಕ್ಕುಂದೂರು ಕಾರ್ಕಳ, ವರ್ಷಂಪ್ರತಿ ನಡೆಯುವ ಗುಳಿಗ ದೈವದ ಕೋಲ ನೇಮೋತ್ಸವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಪೊಲೀಸ್ ಇಲಾಖೆಯ ವತಿಯಿಂದ ಶುಕ್ರವಾರ ದಂದು ರಾತ್ರಿ 8.30 ಕ್ಕೆ ಗಗ್ಗರ ಸೇವೆ ನಂತರ ಅನ್ನಸಂತರ್ಪಣೆ ವಿಜೃಂಭಣೆಯಿoದ ನಡೆಯಿತು.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ದೈವದ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಆರು ಮಾಗಣೆ ಬಾವ ಗುತ್ತು ಸುಕುಮಾರ್ ಜೈನ್, ದೈವ ಮಧ್ಯಸ್ತ ರಮೇಶ್ ನಾಯಕ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ ಉಡುಪಿ ಎಸ್.ಪಿ. ಅಕ್ಷಯ ಮಚ್ಚಿಂದ್ರ, ಕಾರ್ಕಳ ಡಿ ವೈ ಎಸ್.ಪಿ. ವಿಜಯ್ ಪ್ರಸಾದ್, ಕಾರ್ಕಳ ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್ ಟಿ. ಡಿ, ಕಾಪು ಸರ್ಕಲ್ ಇನ್ಸ್ಪೆಕ್ಟರ್ ಪೂವಯ್ಯ, ಕಾರ್ಕಳ ನಗರ ಠಾಣಾಧಿಕಾರಿ ಪ್ರಸನ್ನ, ದಾಮೋದರ, ಕಾರ್ಕಳ ಗ್ರಾಮಾಂತರ ಎಸ್. ಐ ತೇಜಸ್ವಿ, ಅಜಕಾರ್, ಎಸ್ ಐ.ತಿಮ್ಮೇಶ್ ಬಿ. ಎನ್,, ಹೆಬ್ರಿ ಸಬ್ ಇನ್ಸ್ಪೆಕ್ಟರ್ ಸುದರ್ಶನ್,ಕೋಟ ಸಬ್ ಇನ್ಸ್ಪೆಕ್ಟರ್ ಮಧು,ಕಾಪು ಸಬ್ ಇನ್ಸ್ಪೆಕ್ಟರ್ ಶ್ರೀಶೈಲ, ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ ಅರುಣ್ ಕುಮಾರ್ ಭಟ್ ಕಾರ್ಕಳ

error: