May 6, 2024

Bhavana Tv

Its Your Channel

ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿಷ್ಠೆ ಕಲಶಾಭಿಷೇಕ ,ಪ್ರಸನ್ನಪೂಜೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮ

ಕಾರ್ಕಳ:– ಶ್ರೀ ಮಾರಿಯಮ್ಮ ದೇವಿಯ ಪ್ರತಿಷ್ಠೆ ಕಲಶಾಭಿಷೇಕ ,ಪ್ರಸನ್ನಪೂಜೆ, ಹಾಗೂ ಶ್ರೀ ಉಚ್ಚಂಗಿ ದೇವಿಯ ಪ್ರತಿಷ್ಠೆ ,ಕಲಶಾಭಿಷೆಕ ,ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಕಾರ್ಕಳ ಶ್ರೀ ಪ್ರಸಾದ ತಂತ್ರಿಕ್ಷೇತ್ರ ತಂತ್ರಿ ಗಳು ಅರ್ಚಕ ವರ್ಗ ದವರ ನೇತೃತ್ವದಲ್ಲಿ ನಡೆಯಿತು.

ಸಚಿವರು ವಿ.ಸುನಿಲ್ ಕುಮಾರ್ ಕರ್ನಾಟಕ ಸರಕಾರ ಅಧ್ಯಕ್ಷರು, ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರ ರು,ಕೆ. ಬಿ.ಗೋಪಾಲ್ ಕೃಷ್ಣ ರಾವ್, ಹಾಗೂ ಇನ್ನಿತರ ಮೊಕ್ತೇಸರ , ಉಚ್ಚಂಗಿ ದೇವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರ ಹಾಗೂ ಉಪಾಧ್ಯಕ್ಷ ವಿಜಯ್ ಶೆಟ್ಟಿ, ನವೀನ್ ನಾಯಕ್,ನವೀನ್ ದೇವಾಡಿಗ, ಮುನಿಯಾಲ್ ಉದಯ ಕುಮಾರ್ ಶೆಟ್ಟಿ,ಖ್ಯಾತ ನ್ಯಾಯವಾದಿ ಮಣಿ ರಾಜ್ ಶೆಟ್ಟಿ ,ಸುಧಾಕರ್ ಶೆಟ್ಟಿ, ಜಿ. ಎಸ್.ಬಿ. ಸಮಾಜದ ಪಾಲಡ್ಕ ನರಸಿಂಹ ಪೈ, ಜಗನ್ನಾಥ್ ಮಲ್ಯ, ಹಾಗೂ ಇನ್ನಿತರ ದಾನಿಗಳು ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರಿಯಮ್ಮ ದೇವಿಯ ಪ್ರಸಾದ ಭೋಜನ ಸ್ವೀಕರಿಸಿ ದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪ್ರಸಾದ ಭೋಜನ ಸ್ವೀಕರಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: