ಕಾರ್ಕಳ; ಮನೆಯ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ಯತ್ನ ಮಾಡಿದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಮುಂದುಗಡೆ ಸೈಟ್ನ ಗೀತಾ ನಿವಾಸ ಮನೆಯಲ್ಲಿ ನಡೆದಿದೆ. ಸುಂದರ ಕುಲಾಲ್ ಅವರ ಪತ್ನಿ ಗೀತಾ ಶನಿವಾರ ಮಧ್ಯಾಹ್ನ ಅತ್ತೂರಿನ ತಾಯಿ ಮನೆಗೆ ಹೋಗಿದ್ದು ರಾತ್ರಿಯ ವೇಳೆಗೆ ಕಳ್ಳರು ಮನೆಯ ಮುಂದಿನ ಬಾಗಿಲ ಬೀಗ ಒಡೆದು ಕಳ್ಳತನಕ್ಕೆ ಯತ್ನ ಮಾಡಿದ್ದಾರೆ, ನೆರೆಮನೆಯವರು ಮನೆಯ ಬಾಗಿಲು ಎರಡು ದಿನದಿಂದ ತೆರೆದಿದ್ದ ಕಾರಣ ಬಂದು ನೋಡಿದಾಗ ಮನೆ ದರೋಡೆಯಾದ ವಿಚಾರ ಗೊತ್ತಾಗಿದೆ. ಸುಂದರ ಕುಲಾಲ್ ಅತ್ತೂರಿನಿಂದ ವಾಪಸ್ ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲನ್ನು ಮುರಿದು ಮನೆಯ ಕೋಣೆಯಲ್ಲಿನ ಕಪಾಟನ್ನು ಒಡೆಯಲು ಯತ್ನ ಮಾಡಿದ್ದಾರೆ. ಕಪಾಟು ಒಡೆಯದ ಕಾರಣ ಯಾವುದೇ ವಸ್ತುಗಳನ್ನು ಕಳ್ಳರಿಗೆ ದೋಚಲು ಸಾಧ್ಯವಾಗಲಿಲ್ಲ . ಮನೆಯ ಇಸ್ತಿç ಪೆಟ್ಟಿಗೆಯನ್ನು ಕಳ್ಳರು ಕೊಂಡೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಕಾರ್ಕಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ವರದಿ ; ಅರುಣ ಭಟ್ ಕಾರ್ಕಳ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.