ಕಾರ್ಕಳ : ಚಿಕ್ಕೋಡಿ ಹಿರೇಕೋಡಿಯ ನಂದಿಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಬರ್ಬರ ಹತ್ಯೆಯನ್ನು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಡಿ ಆರ್ ರಾಜು ಖಂಡಿಸಿದ್ದಾರೆ.
ಜೈನ ಮುನಿಯ ಹತ್ಯೆ ಒಬ್ಬ ಸಾಮಾನ್ಯ ವ್ಯಕ್ತಿಯ ಹತ್ಯೆಯಲ್ಲ ಇದು ಮಾನವ ಸಮಾಜದ ಹತ್ಯೆಯಾಗಿದೆ. ವಿಕ್ರತ ಮನಸ್ಸಿನ ದುರುಳ ವ್ಯಕ್ತಿಗಳು ಸಮಾಜ ಸ್ವಾಸ್ಥ್ಯ ಕ್ಕಾಗಿ ತಮ್ಮ ಜೀವಿತಾವಧಿಯನ್ನೇ ಪಣವಾಗಿಟ್ಟು ಜೀವನವನ್ನು ಸೇವೆಗಾಗಿ ಮುಡಿಪಾಗಿಟ್ಟ ,ಮುನಿವರ್ಯರು ನಿಸ್ವಾರ್ಥ ಸೇವೆಗೈದ ,ತನ್ನ ಜೀವನದುದ್ದಕ್ಕೂ ಮಾನವ ಸಮುದಾಯಕ್ಕೆ ಶಾಂತಿಯ ಸಂದೇಶವನ್ನು ಸಾರುತ್ತಿದ್ದ ,ಜೈನ ಮುನಿಗಳ ಹತ್ಯೆ ಎಲ್ಲರಿಗೂ ಅಘಾತವನ್ನುಂಟುಮಾಡಿದೆ ಈ ಅಮಾನವೀಯ ಕ್ರತ್ಯವನ್ನು ಮಾಡಿ ಮನುಕುಲಕ್ಕೆ ಅಪಚಾರವೆಸಗಿದ ದುಷ್ಟರಿಗೆ ಸರಕಾರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಂಡು ತಕ್ಷಣವೇ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ .
ಮನುಕುಲದ ಸೇವೆಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಜಗತ್ತಿಗೆ ಶಾಂತಿ, ಅಹಿಂಸೆ ಸಂದೇಶ ನೀಡಿ ಮನುಷ್ಯ ಜನ್ಮವನ್ನು ಸಾರ್ಧಕಗೊಳಿಸಿದ ಜೈನ ಮುನಿಯನ್ನು ತಮ್ಮ ಸ್ವಾರ್ಥಕ್ಕಾಗಿ ನಿಷ್ಕಾರುಣ್ಯವಾಗಿ ಹತ್ಯೆಗೈದ ಕೊಲೆಗಡುಕರಿಗೆ ನಮ್ಮ ಕಾನೂನಿನ ಅತ್ಯಂತ ಕಠಿಣ ಶಿಕ್ಷೆ ಅತೀ ಶೀಘ್ರವಾಗಿ ನೀಡುವ ಮೂಲಕ ಮುನಿಗಳ ಆತ್ಮಕ್ಕೆ ಶಾಂತಿ ದೊರಕಿಸುವ ಕೆಲಸ ಮಾಡುವಂತೆ ಅವರು ಆಗ್ರಹಿಸಿದ್ದಾರೆ.
ವರದಿ ; ಅರುಣ ಭಟ್, ಕಾರ್ಕಳ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.