May 4, 2024

Bhavana Tv

Its Your Channel

ಕಾಲುಜಾರಿ ಬಿದ್ದು ಮೃತ

ಭಟ್ಕಳ: ಮನೆಯಿಂದ ಕೂಲಿಕೆಲಸಕ್ಕೆಂದು ತೆರಳಿದ ವ್ಯಕ್ತಿಯೊರ್ವ ಹಳ್ಳದ ಸಂಕ ದಾಟುವಾಗ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಶಿರಾಲಿಯ ಹೆಗಡೆ ಗ್ಯಾರೆಜ್ ಬಳಿ ಗುರುವಾರ ನಡೆದಿದೆ.
ಶಿರಾಲಿಯ ಕೋಟೆಬಾಗಿಲು ನಿವಾಸಿ ಶಿವರಾಮ ಮಂಜಪ್ಪ ನಾಯ್ಕ(41) ಮೃತ ವ್ಯಕ್ತಿ. ಇವರು ಬೆಳಗಿನ ‌ಜಾವ ಮನೆಯಿಂದ ಕೂಲಿಕೆಲಸಕ್ಕೆ ತೆರಳಿದ್ದರು. ಶಿರಾಲಿಯ ಹೆಗಡೆ ಗ್ಯಾರೆಜ್ ಬಳಿ ಹಳ್ಳದ ಸಂಕ ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ
ಮೃತಪಟ್ಟಿದ್ದಾರೆ. ಈ ಕುರಿತು ಮಂಜುನಾಥ ನಾಗಪ್ಪ ನಾಯ್ಕ ಗ್ರಾಮೀಣ ಠಾಣೆಯಲ್ಲಿ ದೂರು‌‌ ನೀಡಿದ್ದು ಪ್ರಕರಣ ದಾಖಲಿಸಿ ಕೊಂಡ ಎ.ಎಸ್.ಐ ಮಂಜುನಾಥ ಬಿ‌ ಗೌಡರ್ ತನಿಖೆ ಕೈಗೊಂಡಿದ್ದಾರೆ.

error: