ಗೋಕರ್ಣ ; ಗಣೇಶಚತುರ್ಥಿ ಪ್ರಯುಕ್ತ “ಮಂಗಲಮೂರ್ತಿ ಗಣೇಶನ ಮೂರ್ತಿಯನ್ನು” ವೆಂಕಟರಮಣ ದೇವಾಲಯದಿಂದ ಪಲ್ಲಕ್ಕಿ ಮೂಲಕ ತರಲಾಗುತ್ತಿತ್ತು. ಜಿಲ್ಲಾಡಳಿತದ ಆದೇಶದಂತೆ ಉತ್ಸವಗಳನ್ನು ರದ್ದುಪಡಿಸಿ, “ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ. ಶ್ರೀ. ರಾಘವೇಶ್ವರ ಭಾರತೀ ಮಹಾಸ್ವಾಮಿಗಳ” ಅನುಗ್ರಹ ಪಡೆದು ಕೋಟಿರುದ್ರ ಚಂದ್ರ ಶಾಲೆಯಿಂದ ವಾಲಗ ,ಕಟ್ಟಿಗೆ , ದೀವಟಿಗೆ ಸಮೇತ ವೈಭವದಿಂದ ಕರೆತರಲಾಯಿತು . ಅರ್ಚಕರಾದ ವಿದ್ವಾನ್ ಸಾಂಬ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು.
ಇಂದು ವಿಶೇಷ ಪಂಚಭಕ್ಷ ನೈವೇದ್ಯ , ಮಹಾಮಂಗಳಾರತಿ ನಡೆಯಿತು. ದಿನಾಂಕ ೨೨-೦೮-೨೦೨೦ ಶನಿವಾರ ಸಾಯಂಕಾಲ ದಂಡಾವಳಿ ಪೂಜೆ , ವಿದ್ವಜ್ಜನರಿಂದ ವೇದಸಭೆ ಜರುಗಲಿದೆ . ಎರಡನೇ ದಿನ ಗಣಪತಿ ಮೂರ್ತಿಯನ್ನು ಬಿರುದು-ಬಾವಲಿ, ಪಕ್ಕೆ-ಪರಾಕು ಸಹಿತ ಮೆರವಣಿಗೆಯಲ್ಲಿ ಸಮುದ್ರಕ್ಕೆ ತಂದು ವಿಸರ್ಜನೆ ಮಾಡಲಾಗುತ್ತದೆ . ಅಂದು ಶ್ರೀ ಮಹಾಬಲೇಶ್ವರ ದೇವಾಲಯದ ಗಣಪತಿ ಮೂರ್ತಿಯನ್ನು ವಿಸರ್ಜಿಸಿದ ನಂತರವೇ ಊರಿನ ಗಣಪತಿ ಮೂರ್ತಿಗಳನ್ನು ಸಮುದ್ರಕ್ಕೆ ತಂದು ವಿಸರ್ಜಿಸಲಾಗುತ್ತದೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ