May 18, 2024

Bhavana Tv

Its Your Channel

ಭಟ್ಕಳ ಆಸ್ಪತ್ರೆಯ ಆವರಣದಲ್ಲಿ ನೂತನ ಗಾರ್ಡನ್ ನಿರ್ಮಿಸುವ ಸ್ಥಳದಲ್ಲಿ ವನಮಹೋತ್ಸವ

ಭಟ್ಕಳ: ತಾಲೂಕಾ ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ನೂತನವಾಗಿ ಗಾರ್ಡನ್ ನಿರ್ಮಿಸಲು ಉದ್ದೇಶಿಸಿರುವ ಸ್ಥಳದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರು ಗಿಡ ನೆಡುವುದರ ಮೂಲಕ ಉದ್ಘಾಟಿಸಿರು.
ನಂತರ ಮಾತನಾಡಿದ ಅವರು ಆಸ್ಪತ್ರೆಗೆ ಬರುವವರು ಸದಾ ಚಿಂತೆಯಲ್ಲಿಯೇ ಬರುತ್ತಾರೆ, ಅವರಿಗೆ ಆಸ್ಪತ್ರೆಯ ವಾತಾವರಣದಲ್ಲಿ ಸ್ವಲ್ಪ ಹಸಿರು ಗಿಡ, ಮರಗಳನ್ನು ಕಂಡಾಗ ತಮ್ಮ ಚಿಂತೆ ಸ್ವಲ್ಪ ದೂರಾಗುತ್ತದೆ. ಅಲ್ಲದೇ ದಿನವಿಡೀ ಒತ್ತಡದಲ್ಲಿಯೇ ಕೆಲಸ ಮಾಡುವ ಆಸ್ಪತ್ರೆಯ ಸಿಬ್ಬಂದಿಗಳಿಗೂ ಕೂಡಾ ಸುತ್ತಲಿನ ಹಸಿರಿನ ವಾತಾವರಣ ನೋಡಿ ಸ್ವಲ್ಪ ಒತ್ತಡದಿಂದ ಹೊರ ಬರಲು ಸಾಧ್ಯವಾಗುತ್ತದೆ ಎಂದು ಆಸ್ಪತ್ರೆಯ ಆವರಣದಲ್ಲಿ ಗಾರ್ಡನ್ ನಿರ್ಮಾಣ ಮಾಡಲು ಯೋಚಿಸಲಾಯಿತು ಎಂದರು.ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ.ಸತೀಶ್ ಬಿ.ಸಮಾಜ ಸೇವಕ ನಜೀರ್ ಕಾಶಿಮಜಿ, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: