
ಭಟ್ಕಳ: ಅಕ್ರಮವಾಗಿ ಕಾರೊಂದರಲ್ಲಿ ೨೦೦ ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿರುವ ವೇಳೆ ಶಿರಾಲಿ ಸರ್ಕಲ್ ಸಮೀಪ ಕಾರ ತಡೆದು ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಸೋಮವಾರ ನಡೆದಿದೆ.ಆರೋಪಿ ಸಲಿಂ ಇಬ್ರಾಹಿಂ ಸಾಬ್ , ನಬಿ ಕಾಟನಳಿ ಹಾಗೂ ತಬ್ರೇಜ್ ಎಂದು ತಿಳಿದು ಬಂದಿದೆ. ಇವರು ಇಲ್ಲಿಯೋ ಜಾನುವಾರನ್ನು ವದೆ ಮಾಡಿ ಸುಮಾರು ೪೦ ಸಾವಿರ ಮೌಲ್ಯದ ೨೦೦ ಕೆಜಿ ಆಗುವಷ್ಟು ಮಾಂಸವನ್ನು ಯಾವುದೇ ಪಾಸ್ ಪರವಾನಿಗೆ ಇಲ್ಲದೆ ಟಾಟಾ ಇಂಡಿಕಾ ಕಾರಿನಲ್ಲಿ ತುಂಬಿ ಸಾಗಾಟ ಮಾಡುವ ವೇಳೆ ಶಿರಾಲಿ ಸರ್ಕಲ್ ಸಮೀಪ ಕಾರಿನ ಸಮೇತ ಆರೋಪಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯ ಪಿ.ಎಸ್.ಐ ಭರತ ಕುಮಾರ್ ವಿ.ದೂರು ನೀಡಿದ್ದು ಕಾನ್ಸ್ಟೆಬಲ್ ಮಂಜುನಾಥ ಗೊಂಡ ಗೋ ಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡ ತನಿಖೆ ಕೈಗೊಂಡಿದ್ದಾರೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ