ಭಟ್ಕಳ: ಅಕ್ರಮವಾಗಿ ಕಾರೊಂದರಲ್ಲಿ ೨೦೦ ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿರುವ ವೇಳೆ ಶಿರಾಲಿ ಸರ್ಕಲ್ ಸಮೀಪ ಕಾರ ತಡೆದು ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಸೋಮವಾರ ನಡೆದಿದೆ.ಆರೋಪಿ ಸಲಿಂ ಇಬ್ರಾಹಿಂ ಸಾಬ್ , ನಬಿ ಕಾಟನಳಿ ಹಾಗೂ ತಬ್ರೇಜ್ ಎಂದು ತಿಳಿದು ಬಂದಿದೆ. ಇವರು ಇಲ್ಲಿಯೋ ಜಾನುವಾರನ್ನು ವದೆ ಮಾಡಿ ಸುಮಾರು ೪೦ ಸಾವಿರ ಮೌಲ್ಯದ ೨೦೦ ಕೆಜಿ ಆಗುವಷ್ಟು ಮಾಂಸವನ್ನು ಯಾವುದೇ ಪಾಸ್ ಪರವಾನಿಗೆ ಇಲ್ಲದೆ ಟಾಟಾ ಇಂಡಿಕಾ ಕಾರಿನಲ್ಲಿ ತುಂಬಿ ಸಾಗಾಟ ಮಾಡುವ ವೇಳೆ ಶಿರಾಲಿ ಸರ್ಕಲ್ ಸಮೀಪ ಕಾರಿನ ಸಮೇತ ಆರೋಪಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯ ಪಿ.ಎಸ್.ಐ ಭರತ ಕುಮಾರ್ ವಿ.ದೂರು ನೀಡಿದ್ದು ಕಾನ್ಸ್ಟೆಬಲ್ ಮಂಜುನಾಥ ಗೊಂಡ ಗೋ ಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡ ತನಿಖೆ ಕೈಗೊಂಡಿದ್ದಾರೆ.
More Stories
ಹೊಳೆಯಲ್ಲಿ ಆಕಸ್ಮಿಕವಾಗಿ ಮುಳುಗಿ ಇಬ್ಬರ ಸಾವು.
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು: