May 19, 2024

Bhavana Tv

Its Your Channel

ಕೆ.ಸಿ.ಇ.ಟಿ. ೨೦೨೧ರ ಫಲಿತಾಂಶ ಪ್ರಕಟ , ಅತ್ಯುತ್ತಮ ರ‍್ಯಾಂಕ ಪಡೆದು ಭಟ್ಕಳದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ಗಮನಾರ್ಹ ಸಾಧನೆ

ಭಟ್ಕಳ: ಕೆ.ಸಿ.ಇ.ಟಿ. ೨೦೨೧ರ ಫಲಿತಾಂಶ ಪ್ರಕಟವಾಗಿದ್ದು, ಭಟ್ಕಳದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜು ಅತ್ಯುತ್ತಮ ರ‍್ಯಾಂಕಗಳನ್ನು ಪಡೆದು ಉತ್ತರಕನ್ನಡ ಜಿಲ್ಲೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಕುಮಾರ ಚೇತನ ರಾಜು ನಾಯ್ಕ, ಮತ್ತು ಕುಮಾರಿ ವಿನುತಾ ಎಸ್. ಭಟ್ ಅಗ್ರಿಕಲ್ಚರ್ ವಿಭಾಗದಲ್ಲಿ ೬೯೨ ಹಾಗೂ ೮೫೯ ನೇ ರ‍್ಯಾಂಕ್ ಪಡೆದು ಭಟ್ಕಳ ತಾಲೂಕಿಗೆ ಪ್ರಥಮ ಮತ್ತು ಇಂಜಿನೀಯರಿAಗ್ ವಿಭಾಗದಲ್ಲಿ ಕುಮಾರಿ ವಿನುತಾ ಎಸ್. ಭಟ್ ೧೧೪೬ನೇ ರ‍್ಯಾಂಕ್ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ಕುಮಾರ ಪ್ರತಿಕ್ ಶಾನಭಾಗ್ ೧೨೧೧ನೇ ರ‍್ಯಾಂಕ್ ಪಡೆದು ದ್ವಿತೀಯ ಸ್ಥಾನ ಪಡೆದು, ಎರಡು ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಅಗ್ರಿಕಲ್ಚರ್ ಮತ್ತು ಇಂಜಿನೀಯರಿAಗ್ ವಿಭಾಗದಲ್ಲಿ ತಲಾ ೧೦ ವಿದ್ಯಾರ್ಥಿಗಳು ೫೦೦೦ ಒಳಗಿನ ರ‍್ಯಾಂಕ್ ಪಡೆದಿದ್ದಾರೆ.
ಇಂಜಿನೀಯರಿAಗ್, ಅಗ್ರೀಕಲ್ಚರ್ ವಿಭಾಗದಲ್ಲಿ ೬೦೬, ೬೯೨, ೧೧೪೬, ೧೨೧೧, ೨೨೩೮, ೨೩೫೬, ೩೧೫೦, ೩೫೬೬, ೪೭೫೮, ೪೯೧೬, ೫೧೦೪, ೬೦೫೮, ೬೭೩೪ ಹಾಗೂ ಇನ್ನಿತರ ಪ್ರಮುಖ ರ‍್ಯಾಂಕ್‌ಗಳು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿನೂತ್ ನಾಯ್ಕ, ಚಿನ್ಮಯ್ ಅಂಕೋಲೇಕರ್, ಮೊಹ್ಮದ್ ಷರೀಫ್, ಹರ್ಶದ್ ನಾಯ್ಕ, ಚಂದ್ರಿಕಾ ನಾಯ್ಕ, ಪೂಜಾ ವಿ. ನಾಯ್ಕ, ಸುಚಿತ್ರ ವಿ. ನಾಯ್ಕ, ಸೃಜನ ನಾಯ್ಕ, ಉಷಾ ನಾಯ್ಕ, ಪ್ರಜ್ವಲ್ ಆರ್. ಎಸ್. ಹಾಗೂ ಇನ್ನಿತರ ವಿದ್ಯಾರ್ಥಿಗಳು ೮೦೦೦ಕ್ಕೂ ಒಳಗಿನ ರ‍್ಯಾಂಕ್ ಪಡೆದು ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಾಗೂ ಉನ್ನತ ಮಟ್ಟದ ಕೋರ್ಸಗಳಿಗೆ ಪ್ರವೇಶ ಪಡೆಯಲು ಅರ್ಹತೆಯನ್ನು ಪಡೆದು ಕೊಂಡಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಕಾರ್ಯದರ್ಶಿಗಳು, ಮುಖ್ಯೊಪಾಧ್ಯಾಯರು ಮತ್ತು ಸಹ-ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

error: