ಭಟ್ಕಳ : ಮಾವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿಸಗಾರಮಕ್ಕಿ ನ್ಯಾಷನಲ್ ಕಾಲೊನಿಯಲ್ಲಿ ಕಿಡಿಗೇಡಿಗಳು ರಾತ್ರಿ ನಾಗಬನದ ಮೂರ್ತಿಯನ್ನು ಕಲ್ಲಿನಿಂದ ಒಡೆದು ಧ್ವಂಸ ಮಾಡಿದ್ದಾರೆ.
ಮಾವಳ್ಳಿಯ ನ್ಯಾಷನಲ್ ಕಾಲೊನಿ ಸರ್ವೆ ನಂ. ೬೪೦ರ ಖಾಸಗಿ ಜಾಗದಲ್ಲಿ ಈ ಘಟನೆ ನಡೆದಿದೆ. ಅಲ್ಲಿ ವಾಸಿಸುವ ಕುಟುಂಬವೊAದು ತಮ್ಮ ಮನೆಯ ಹಿಂಭಾಗದಲ್ಲಿ ನಾಗಬನ ಸ್ಥಾಪಿಸಿ ಪೂಜಿಸಿಕೊಂಡು ಬರುತ್ತಿದೆ. ಘಟನೆಗೆ ಸಂಬAಧಿಸಿದAತೆ ಸ್ಥಳದ ಮಾಲೀಕ ನರಸಿಂಹ ಭೈರಾ ನಾಯ್ಕ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿಪಿಐ ಮಹಾಬಲೇಶ್ವರ ನಾಯ್ಕ ಹಾಗೂ ಪಿಎಸೈ ರವೀಂದ್ರ ಬಿರಾದಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ನರಸಿಂಹ ನಾಯ್ಕ, ‘ಈ ಹಿಂದೆ ಕೂಡ ನಾಗಬನದ ಒಳಗಡೆ ಬಿಯರ್ ಬಾಟಲಿ ಎಸೆದು ಹೋಗಿದ್ದರು. ಈಗ ಪುನಃ ವಿಗ್ರಹ ಧ್ವಂಸ ಮಾಡಿ ಹೋಗಿದ್ದಾರೆ. ನಾಗಬನದ ಅಕ್ಕಪಕ್ಕದಲ್ಲಿ ಅನ್ಯಕೋಮಿನ ಜನರು ವಾಸಿಸುತ್ತಿದ್ದಾರೆ.ಇದು ಇಂತಹವರದೇ ಕೃತ್ಯ ಎಂದು ಹೇಳಲು ಸಾಧ್ಯವಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ಚುರುಕುಗೊಳಿಸಿ ಅಪರಾಧಿಗಳನ್ನು ಬಂಧಿಸುವAತೆ ಆಗ್ರಹಿಸಿದ್ದಾರೆ.
More Stories
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್