ಭಟ್ಕಳ: ಕಲಂ 179 ಐ.ಪಿ.ಸಿ. ಅಡಿಯಲ್ಲಿ ಸರಿಯಾದ ಮಾಹಿತಿ ನೀಡದೇ ಇರುವುದಕ್ಕಾಗಿ ಆರೋಪಿತನಿಗೆ 1 ತಿಂಗಳು ಸಜೆ ಹಾಗೂ 500 ರೂಪಾಯಿ ದಂಡ ವಿಧಿಸಿ ಜೆ.ಎಂ.ಎಫ್.ಸಿ. ನ್ಯಾಯಾಧೀಶ ತೀರ್ಪು ನೀಡಿದ್ದಾರೆ
ಭಟ್ಕಳ ನಗರದಲ್ಲಿ ತರಕಾರಿ ಮಾರುತ್ತಿರುವ ಮಹಿಳೆಯೋರ್ವಳಲ್ಲಿ ಪುರಸಭೆಯ ಸುಂಕ ವಸೂಲಿ ಮಾಡಲು ಬಂದ ಕೆ.ಎಂ.ಶಾಜೀರ್ ಇಕ್ಕೇರಿ ಎನ್ನುವವರು ಎರಡು ಪಟ್ಟು ಸುಂಕ ಕೊಡಬೇಕು ಎಂದು ಧಮಕಿ ಹಾಕಿದ ಕುರಿತು 2017ರಲ್ಲಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ನಡೆಸುವ ಸಂದರ್ಭದಲ್ಲಿ ಪೊಲಿಸರಿಗೆ ಆರೋಪಿತನು ಸರಿಯಾದ ಮಾಹಿತಿಯನ್ನು ನೀಡದೇ ಬಂಧನ ತಿಳುವಳಿಕೆ ಪತ್ರಗಳಿಗೂ ಸಹಿ ಹಾಕದೇ ನಿರಾಕರಿಸಿದ ಕುರಿತೂ ದೂರಿನಲ್ಲಿ ನಮೂದಾಗಿತ್ತು. ತನಿಖೆಯನ್ನು ನಡೆಸಿದ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಫವಾಜ್ ಪಿ.ಎ. ಅವರು ಆರೋಪಿತನಿಗೆ ಕಲಂ 179 ಐ.ಪಿ.ಸಿ. ಅಡಿಯಲ್ಲಿ ಸರಿಯಾದ ಮಾಹಿತಿ ನೀಡದೇ ಇರುವುದಕ್ಕಾಗಿ 1 ತಿಂಗಳು ಸಜೆ ಹಾಗೂ 500 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತುಂಬಲು ತಪ್ಪಿದಲ್ಲಿ 1 ವಾರಗಳ ಕಾಲ ಸಾದಾ ಶಿಕ್ಷೆ ಅನುಭವಿಸಬೇಕು ಎಂದೂ ತೀರ್ಪಿನಲ್ಲಿ ಹೇಳಲಾಗಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ವಿವೇಕ ಆರ್. ನಾಯ್ಕ ಅವರು ವಾದಿಸಿದ್ದರು.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.