May 19, 2024

Bhavana Tv

Its Your Channel

ಮುಂಡಳ್ಳಿಯ ಅವರ್ ಲೇಡಿ ಆಫ್ ಲೂರ್ಡ್ಸ ಮಾತಾ ಚರ್ಚಿನಲ್ಲಿ ದೃಢೀಕರಣ ಸಂಸ್ಕಾರ ಕಾರ್ಯಕ್ರಮ

ಭಟ್ಕಳ ಮುಂಡಳ್ಳಿಯ ಅವರ್ ಲೇಡಿ ಆಫ್ ಲೂರ್ಡ್ಸ ಮಾತಾ ಚರ್ಚಿನಲ್ಲಿ ದೃಢೀಕರಣ ಸಂಸ್ಕಾರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರವಾರದ ಬಿಷಪ್ ಡಾ. ಡೆರಿಕ್ ಫೆರ್ನಾಂಡಿಸ್ ಅವರ ಮೊನ್ಸಿರ‍್ಸ್ ಸೈಮನ್ ಟೆಲ್ಲಿಸ್ ರವರು ಮಾತನಾಡಿ ಭಟ್ಕಳ ಒಂದು ಉತ್ತಮ ಪ್ರದೇಶವಾಗಿದ್ದು ಇಲ್ಲಿನ ಮಲ್ಲಿಗೆ ಅಂತಾರಾಷ್ಟಿçÃಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಮಲ್ಲಿಗೆ ಕಂಪು ಎಲ್ಲಾ ಕಡೆಯಲ್ಲಿಯೂ ಕೂಡಾ ಹರಡಿದ್ದು ಅದೇ ರೀತಿಯಾಗಿ ಇಲ್ಲಿನ ಜನರ ಮನಸ್ಸು ಕೂಡಾ ಮಲ್ಲಿಗೆಯಂತೆಯೇ ಇದೆ. ಇಲ್ಲಿ ಇಂದು ದೃಢೀಕರಣ ಸಂಸ್ಕಾರವನ್ನು ಪಡೆದವರು ಸಮಾಜದಲ್ಲಿ ಭಟ್ಕಳ ಮಲ್ಲಿಗೆಯಂತೆ ಉತ್ತಮ ಸಂಸ್ಕಾರವAತರಾಗಿ ಭಟ್ಕಳದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಏರಿಸುವಂತಾಗಲಿ ಎಂದು ಹಾರೈಸಿದರು.
ಮುಂಡಳ್ಳಿ ಚರ್ಚನ ಫಾದರ್ ಪ್ರೇಮ್‌ಕುಮಾರ್ ಡಿಸೋಜ ಅವರು ದೃಢೀಕರಣ ಸಂಸ್ಕಾರದ ಕುರಿತು ಮಾತನಾಡುತ್ತಾ, ಮುಂದೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವನ ಸಾಗಿಸಲು ಇದು ಅವಶ್ಯಕವಾಗಿದೆ ಎಂದ ಅವರಯು ಜೀವನದಲ್ಲಿ ನಡೆಯುವ ಏಳು ಸಂಸ್ಕಾರಗಳಲ್ಲಿ ಇದೂ ಕೂಡಾ ಒಂದಾಗಿದ್ದು ಕಳೆದ 30 ದಿನಗಳಿಂದ ಬೋಧನೆಯ ನಂತರ ದೃಢೀಕರಣ ಸಂಸ್ಕಾರಕ್ಕೊಳಗಾದ ಎಲ್ಲರಿಗೂ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಹೊಸಾಡ ಭಾಗದ ಫಾದರ್ ಜೇಮ್ಸ್ ಅವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಂಡಳ್ಳಿ ಭಾಗದ 46, ಪುರವರ್ಗ ಭಾಗದಿಂದ 37 ಹಾಗೂ ಶಿರಸಿಯಿಂದ ಒಬ್ಬರು ಭಾಗವಹಿಸಿದ್ದು ಒಟ್ಟೂ 84 ಜನರು ದೃಢೀಕರಣ ಸಂಸ್ಕಾರದ ಪ್ರಮಾಣ ಪತ್ರವನ್ನು ಪಡೆದುಕೊಂಡರು. ಕಾರ್ಯಕ್ರಮವು ಬೆಳಿಗ್ಗೆ 10 ಗಂಟೆಗೆ ಆರಂಭವಾಗಿದ್ದು ಎಲ್ಲಾ ವಿಧಿವಿಧಾನಗಳಂತೆ ನಡೆದು ಮಧ್ಯಾಹ್ನ 12.30ಕ್ಕೆ ಮುಕ್ತಾಗೊಂಡಿತು. ತಾಲೂಕಿನ ವಿವಿಧ ಭಾಗಗಳಿಂದ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.

error: