May 14, 2024

Bhavana Tv

Its Your Channel

ಭಟ್ಕಳ ತಾಲ್ಲೂಕಿನ ಮುಂಡಳ್ಳಿ ಯಲ್ಲಿ ಅಕ್ರಮವಾಗಿ ಕೋಣಗಳ ಸಾಗಾಟ ಮಾಡುತ್ತಿದ್ದ ಆರೋಪಿ ಯನ್ನು ಬಂಧಿಸಿದ ಘಟನೆ ಶನಿವಾರ ನಡೆದಿದೆ.

ಭಟ್ಕಳ ; ಬಂಧಿತ ಆರೋಪಿಯಾದ ನಾಗಪ್ಪ ಬೆರ್ಮ ನಾಯ್ಕ ಮುಂಡಳ್ಳಿ ಹೊಸ್ಮನೆ,ನಿವಾಸಿ ಎಂದು ತಿಳಿದು ಬಂದಿದೆ ಹಾಗೂ ಇನ್ನೊಬ್ಬ ಆರೋಪಿ ಗೋವಿಂದ ಲಚ್ಮಯ್ಯ ನಾಯ್ಕ ಮುಂಡಳ್ಳಿ, ಹೊಸ್ಮನೆ,ನಿವಾಸಿ ನಾಪತ್ತೆ ಆಗಿದ್ದಾನೆ, ಈ ಇಬ್ಬರು ಆರೋಪಿಗಳು ಸೇರಿಕೊಂಡು ವದೆ ಮಾಡುವ ಉದ್ದೇಶದಿಂದ ೪೦ ಸಾವಿರ ರೂಪಾಯಿ ಮೌಲ್ಯದ ಒಟ್ಟು ೨ ಕೋಣಗಳನ್ನು ಮುಂಡಳ್ಳಿ ಸತ್ಯನಾರಾಯಣ ದೇವಸ್ಥಾನದ ಸಮೀಪದಲ್ಲಿ ಯಾವುದೇ ಪಾಸ್, ಪರಮೀಟ್ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುವ ಸಂದರ್ಭದಲ್ಲಿ ಗ್ರಾಮೀಣ ಠಾಣೆ ಪೋಲಿಸರು ಆರೋಪಿ ಯನ್ನು ಬಂಧಿಸಿ ೨ ಕೋಣಗಳನ್ನು ರಕ್ಷಣೆ ಮಾಡಿದ್ದಾರೆ.
ಈ ಬಗ್ಗೆ ಗ್ರಾಮೀಣ ಠಾಣೆ ಪಿ.ಎಸೈ ಭರತ ಕುಮಾರ ದೂರು ನೀಡಿದ್ದು ದೂರನ್ನು ದಾಖಲಿಸಿ ಕೊಂಡ ಎ.ಎಸ್.ಐ ಕೃಷ್ಣಾನಂದ ಸಿ ನಾಯ್ಕ ತನಿಖೆ ಕೈಗೊಂಡಿದ್ದಾರೆ.

error: