ಭಟ್ಕಳ: ರಾಜ್ಯ ಸರಕಾರದ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹನುಮಾನ್ ನಗರದ ಗೋವಿಂದ ನಾಯ್ಕ ಅವರು ಭಟ್ಕಳಕ್ಕೆ ಬರುತ್ತಲೇ ಅದ್ದೂರಿ ಸ್ವಾಗತ ನೀಡಲಾಯಿತು.
ಗೊರಟೆ ಗಡಿಯಲ್ಲಿಯೇ ನೂರಾರು ಕಾರ್ಯಕರ್ತರು ಹೂ ಹಾರ ಹಾಕಿ ಅವರನ್ನು ಬೈಕ್ ರ್ಯಾಲಿಯ ಮೂಲಕ ಭಟ್ಕಳಕ್ಕೆ ಕರೆ ತಂದು ಇಲ್ಲಿನ ಬಿ.ಜೆ.ಪಿ. ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ನಂತರ ಬೈಕ್ ರ್ಯಾಲಿಯ ಮೂಲಕ ಸರ್ಕಲ್ ತಲುಪುತ್ತಲೇ ಕಾರ್ಯಕರ್ತರ ಹರ್ಷೋದ್ಘಾರದೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಹಳ ವರ್ಷಗಳ ಕಾಲ ಹಿಂದುತ್ವಕ್ಕಾಗಿಯೇ ತಮ್ಮ ಹೋರಾಟವನ್ನು ನಡೆಸಿಕೊಂಡು ಬಂದಿದ್ದ ಗೋವಿಂದ ನಾಯ್ಕ ಅವರನ್ನು ಸ್ವಾಗತಿಸಿದ ಕಾರ್ಯಕರ್ತರಲ್ಲಿ ಹೊಸ ಹುರುಪು ಕಾಣುತ್ತಿತ್ತು.
ಕರ್ನಾಟಕ ಸರಕಾರದ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಬೆಂಗಳೂರಿನಿAದ ಭಟ್ಕಳಕ್ಕೆ ಆಗಮಿಸುತ್ತಿರುವ ಗೋವಿಂದ್ ನಾಯ್ಕ್ ಅವರನ್ನು ಶಿರೂರು ಪೇಟೆಯಲ್ಲಿ ಭಾರತೀಯ ಜನತಾ ಪಾರ್ಟಿ ಶಿರೂರು ಕಾರ್ಯಕರ್ತರ ವತಿಯಿಂದ ಶಿರೂರು ಪೇಟೆ ಸರ್ಕಲ್ ನಲ್ಲಿ ಸಮ್ಮಾನಿಸಲಾಯಿತು.ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಾಮಾನ್ಯ ಕಾರ್ಯಕರ್ತನಾದ ನನಗೆ ಈ ಸ್ಥಾನ ನೀಡುವ ಮೂಲಕ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಕೂಡ ಉನ್ನತ ಸ್ಥಾನ ಪಡೆಯಬಹುದು ಅನ್ನೋದನ್ನು ಮತ್ತೊಮ್ಮೆಸಾಬೀತು ಮಾಡಿದ್ದಾರೆ.ಇರುವ ಸಮಯದಲ್ಲಿ ಕರಾವಳಿ ಭಾಗಕ್ಕೆವಿಶೇಷ ಅದ್ಯತೆ ನೀಡಿ ಗರಿಷ್ಟ ಸೇವೆ ಮಾಡುವ ಪ್ರಯತ್ಮ ಮಾಡುತ್ತೇನೆ ಎಂದರು.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.