ಭಟ್ಕಳ: ನಾರಾಯಣ ಯಾಜಿ ಸಾಲೆಬೈಲ್ ಇವರಿಗೆ ಭಾರತ ಸರಕಾರದಿಂದ ಗುರುತಿಸಿ ರಾಷ್ಟ್ರೀಯ ಮಟ್ಟದ ಉತ್ತಮ ಪ್ರಾದೇಶಿಕ ವ್ಯವಸ್ಥಾಪಕ ಪ್ರಶಸ್ತಿ ಬಂದಿದ್ದು ಆದನ್ನು ಬ್ಯಾಂಕಿನ ಅಧ್ಯಕ್ಷ ಶ್ರೀ ಗೋಪಿ ಕೃಷ್ಣ ರವರು ಯಾಜಿಯವರ ಸ್ವಗ್ರಹ ಹೊನ್ನಾವರಕ್ಕೆ ಬಂದು ನೀಡಿದರು.
ಯಾಜಿ ಯವರು ಈಗಾಗಲೇ ನಿವೃತ್ತಿ ಹೊಂದಿದ್ದರೂ, ಬ್ಯಾಂಕಿನ ಅಧ್ಯಕ್ಷರು ಪ್ರಶಸ್ತಿಯನ್ನು ಅವರ ಮನೆಗೇ ಬಂದು ನೀಡಿದ್ದು ಅಧ್ಯಕ್ಷರ ದೊಡ್ಡ ಗುಣ ಮತ್ತು ಇತರ ಸಹದ್ಯೋಗಿಗಳಿಗೆ ಪ್ರೆರಣೆ. ಯಾಜಿಯವರ ನಾಯಕತ್ವದಲ್ಲಿ ಅವರು ತೋರಿದ ಕಾರ್ಯದಕ್ಷತೆ, ಸಹದ್ಯೋಗಿಗಳೊಂದಿಗೆ ಇದ್ದ ಸೌಹಾರ್ದತೆ ಹಾಗೂ ಕಾಲ ಕಾಲಕ್ಕೆ ಸಿಬ್ಬಂದಿಗಳಿಗೆ ನೀಡಿದ ಸೂಕ್ತ ಸಲಹೆಗಳು ಅವರಿಗೆ ಈ ಗುರಿ ಮುಟ್ಟಿ ಸಾಧನೆ ಗೈದು ಇಂತಹ ಹಲವು ಪ್ರಶಸ್ತಿಗಳು ಲಭಿಸಲು ಸಾಧ್ಯವಾಯಿತು . ಯಾಜಿ ಯವರು ಈ ಮೊದಲು ವರದ ಗ್ರಾಮೀಣ ಬ್ಯಾಂಕ್ ಕುಮುಟಾ ದಲ್ಲಿ ಅಧಿಕಾರಿ ಯಾಗಿ ತಮ್ಮ ಸೇವಾವೃತ್ತಿ ಪ್ರಾರಂಬಿಸಿ ಮುಂದೆ ಬ್ಯಾಂಕ್ ಅಮಲ್ಗಮೆಶನ್ ಹೊಂದಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಪದೋನ್ನತಿ ಹೊಂದಿ ಸಹಾಯಕ ಮಹಾಪ್ರಬಂಧಕ ಹುದ್ದೆ ಅಲಂಕರಿಸಿ ಹಾವೇರಿ ಪ್ರಾದೇಶಿಕ ಕಚೇರಿ ಮುಖ್ಯಸ್ಥರಾಗಿ ಸೇವೆಗೈದುಇತ್ತೀಚಿಗೆ ನಿವೃತ್ತಿ ಹೊಂದಿದ್ದರೂ, ಅವರು ತಮ್ಮ ಅನುಭವ ಮತ್ತು ಅವರಲ್ಲಿರುವ ವಿಷಯಗಳನ್ನು ಕೆಲವು ಪತ್ರಿಕೆ ಗಳಲ್ಲಿ ಪ್ರಕಟಿಸಿ ಸಮಾಜಕ್ಕೆ ಉಣಬಡಿಸುತಿದ್ದಾರೆ. ಅದಲ್ಲದೆ ಅವರಿಗೆ ಮೊದಲಿನಿಂದಲೂ ಮೆಚ್ಚಿಗೆ ಇದ್ದ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಯಾಗಿ ಧಕ್ಷಿಣೋತ್ತರ ಜಿಲ್ಲೆಯಲ್ಲದೆ ಕರ್ನಾಟಕದ ಇತರ ಭಾಗಗಳಲ್ಲಿ ಭಾಗವಹಿಸಿ ಯಕ್ಷಗಾನ ಅಭಿಮಾನಿ ಗಳಿಗೆ ಕಲಾ ಸೇವೆ ನೀಡುತ್ತಿದ್ದಾರೆ,
More Stories
ಹೊಳೆಯಲ್ಲಿ ಆಕಸ್ಮಿಕವಾಗಿ ಮುಳುಗಿ ಇಬ್ಬರ ಸಾವು.
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು: