May 3, 2024

Bhavana Tv

Its Your Channel

ಭಟ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿ ಜೆ ಡಿ ನಾಯ್ಕ , ದೀಪಕ ನಾಯ್ಕ, ಶ್ರೀಧರ ನಾಯ್ಕ ಹಾಗೂ ಅಯ್ಯಪ್ಪ ಅರ್ಜಿ ಸಲ್ಲಿಕೆ

ಭಟ್ಕಳ ಕೆಪಿಸಿಸಿ 2023 ರ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಬಿ ಫಾರ್ಮ್ ಬಗ್ಗೆ ಆಕಾಂಕ್ಷಿಗಳಿAದ ಅರ್ಜಿ ಆಹ್ವಾನಿಸಿದೆ. ರಾಜ್ಯಾದ್ಯಂತ ಹಲವು ಆಕಾಂಕ್ಷಿಗಳು ಕೆಪಿಸಿಸಿ ಕಛೇರಿಗೆ ಆಗಮಿಸಿ ಅರ್ಜಿ ಸಲ್ಲಿಸುತ್ತಿದ್ದು ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಜೆ ಡಿ ನಾಯ್ಕ ತಮ್ಮ ಬೆಂಬಲಿಗರೊAದಿಗೆ ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕೈಕಿಣಿಯ ಶ್ರೀಧರ ನಾಯ್ಕ ಇಂದು ಕೆಪಿ ಸಿಸಿ ಅಧ್ಯಕ್ಷ್ ರಾದ ಡಿ ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕರೂ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಿರಿಯ ನಾಯಕರೂ ಮಾಜಿ ಮಂತ್ರಿಗಳಾದ ಆರ್ ವಿ ದೇಶಪಾಂಡೆ ಇವರೆಲ್ಲರ ಆಶ್ರಿವಾದ ಪಡೆದು ಕೊಂಡು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎರಡು ಲಕ್ಷದ ಡಿಡಿ ಯೊಂದಿಗೆ ಅರ್ಜಿಯನ್ನು ನನ್ನ ಆತ್ಮೀಯರೊಡನೆ ಸಲ್ಲಿಸಿದರು,
ಇವರ ಜೋತೆಗೆ ಮಂಕಿಯ ದೀಪಕ ನಾಯ್ಕ ಮತ್ತು ಅಯ್ಯಪ್ಪ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ.

error: