ಭಟ್ಕಳ: ಮಸ್ಕತ್ನಿಂದ ಗೋವಾಗೆ ಆಗಮಿಸುತ್ತಿದ್ದ ಓಮನ್ ಏರ್ಲೈನ್’ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದ ಭಟ್ಕಳದ ಮಹಿಳೆಯೋರ್ವಳು ಇದ್ದಕ್ಕಿದ್ದಂತೆ ನಿತ್ರಾಣಗೊಂಡಿದ್ದು, ಕೂಡಲೇ ಎಚ್ಚೆತ್ತುಕೊಂಡ ಪೈಲೆಟ್ ವಿಮಾನವನ್ನು ಮುಂಬಯಿಯಲ್ಲಿ ಇಳಿಸಿ ಆಸ್ಪತೆಗೆ ಸಾಗಿಸಲು ನೆರವಾಗುವ ಮೂಲಕ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ನಡೆದಿದೆ.
ಭಟ್ಕಳ ತಾಲೂಕಿನ ಬಂದರ ರೋಡ್ ನಿವಾಸಿಯಾಗಿರುವ ಮಹಿಳೆ ೩೧ ವರ್ಷ ಪ್ರಾಯದವಳಾಗಿದ್ದು, ತನ್ನ ೫ ವರ್ಷದ ಮಗನೊಂದಿಗೆ ಭಟ್ಕಳಕ್ಕೆ ವಾಪಸ್ಸಾಗಲು ಮಸ್ಕತ್ ಗೋವಾ ಮಾರ್ಗವಾಗಿ ಪ್ರಯಾಣಿಸುವ ಓಮನ್ ವಿಮಾನವನ್ನು ಏರಿದ್ದಳು. ಸದರಿ ವಿಮಾನದಲ್ಲಿ ಭಟ್ಕಳದ ೧೫ ಮಂದಿ ಸಹ ಪ್ರಯಾಣಿಕರಾಗಿದ್ದು,
ಅದರಲ್ಲಿ ಓರ್ವರು ವೈದ್ಯರೂ ಇದ್ದ ಬಗ್ಗೆ ಮಾಹಿತಿ ಲಭಿಸಿದೆ. ಇದ್ದಕ್ಕಿದ್ದಂತೆಯೇ ಕುಸಿದು ಕುಳಿತ ಆಕೆಯನ್ನು ಸಹ ಪ್ರಯಾಣಿಕರು ಉಪಚರಿಸಿದ್ದು, ಅಷ್ಟರಲ್ಲಾಗಲೇ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದಳು. ಮಹಿಳೆ ಅಪಾಯಕ್ಕೆ ಸಿಲುಕಿರುವ ಬಗ್ಗೆ ವಿಮಾನದ ಪೈಲೆಟ್ಗೆ ಸಂದೇಶ ರವಾನಿಸಲಾಗಿದ್ದು, ಪೈಲೆಟ್ ವಿಮಾನವನ್ನು ಮುಂಬಯಿಯತ್ತ ಕೊಂಡೊಯ್ದಿದ್ದಾರೆ. ನಂತರ ಮಹಿಳೆಯನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆಯ ನಂತರ ಮಹಿಳೆಯ ಚೇರಿಸಿಕೊಂಡಿರುವ ಬಗ್ಗೆ ಮೂಲಗಳು ತಿಳಿಸಿವೆ. ರಕ್ತದಲ್ಲಿರುವ ಸಕ್ಕರೆಯ ಅಂಶ ದಿಢೀರ್ ಕುಸಿತ ಕಂಡಿರುವುದೇ ಮಹಿಳೆ ಕುಸಿದು ಬೀಳಲು ಕಾರಣ ಎಂದು ಹೇಳಲಾಗಿದೆ. ಮಹಿಳೆಯ ರಕ್ಷಣೆಯ ನಂತರ ಓಮನ್ ಏರ್ಲೈನ್ ವಿಮಾನ ಸುರಕ್ಷಿತವಾಗಿ ಗೋವಾ ತಲುಪಿದೆ.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.