May 3, 2024

Bhavana Tv

Its Your Channel

ಬೆಂಕಿ ಹಾಕಿಕೊಂಡು ಆತ್ಮಹತ್ಯೆ

ಭಟ್ಕಳ: ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧೆಯೋರ್ವಳು ಮನ ನೊಂದು ಮನೆಯ ಪಕ್ಕದ ಗೇರು ಮರದ ಕೆಳೆಗೆ ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಟ್ಟಳ್ಳಿ ಪಂಚಾಯತ ವ್ಯಾಪ್ತಿಯ ತಲಾಂದನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವೃದ್ಧೆಯನ್ನು ಈರಮ್ಮಾ ಮಾದೇವ ನಾಯ್ಕ ಎಂದು ತಿಳಿದು ಬಂದಿದೆ. ಈಕೆ ಕಳೆದ 3-4 ವರ್ಷದಿಂದ ತನಗಾದ ಕಾಲುನೋವಿಗೆ ಉಡುಪಿಯ ಉದ್ವಾವರ ಆಯುರ್ವೇದಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು. ಅವಳ ಕಾಲುನೋವು ವಾಸಿಯಾಗದೆ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯ ಪಕ್ಕದ ಗೇರು ಮರದ ಕೆಳಗೆ ಹೋಗಿ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಕಿಗೆ ಮೃತ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯೆಲ್ಲಿ ಮತೃ ಮಹಿಳೆ ಮಗ ನೀಲಕಂಠ ನಾಯ್ಕ ದೂರು ನೀಡಿದ್ದಾರೆ.
ದೂರನ್ನು ದಾಖಲಿಸಿ ಕೊಂಡ ಎ.ಎಸ್.ಐ ದಿನೇಶ ದಾತೇಕರ್ ತನಿಖೆ ಕೈಗೊಂಡಿದ್ದಾರೆ.

error: