May 4, 2024

Bhavana Tv

Its Your Channel

ಕೊರೋನ ವಾರಿಯರ್ಸ್‌ಗಳಿಗೆ ಸನ್ಮಾನ ಕಾರ್ಯಕ್ರಮ

ದಾಂಡೇಲಿ: ಕರ್ನಾಟಕ ವಿದ್ಯುತ ನಿಗಮ ನೌಕರರ ಸಹಕಾರ ಪತ್ತಿನ ಸಂಘವು ಕೊರೋನ ವಾರಿಯರ್ಸ್ ತಂಡಕ್ಕೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕೊರೋನ ತುರ್ತು ಪರಿಸ್ಥಿತಿಯಲ್ಲಿ ವಾರಿಯರ್ಸ್ ತಂಡವು ಪರಿಸ್ಥಿತಿ ಕೈ ಮೀರದಂತೆ ಸಮರ್ಪಕವಾಗಿ ನಿಭಾಯಿಸಿತು. ತಂಡವು ಧೈರ್ಯವಾಗಿ ಎದುರಿಸಿದ ಸಮಸ್ಯೆಗಳನ್ನು ಸಂಘವು ಶ್ಲಾಘಸಿತು. ಡಾ. ಪೃಥ್ವಿ ಪೈ ರವರಿಗೆ ಶಾಲು ಹೊದಿಸಿ ಕಿರುಕಾಣಿಕೆ ನೀಡಿ ಗೌರವಿಸಲಾಯಿತು.ತಂಡದ ಸದಸ್ಯರುಗಳಿಗೆ ಸಂಘವು ಕಿರು ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೊರೋನ ವಾರಿಯರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಡಾಕ್ಟರ್ ಪೃಥ್ವಿ ಪೈ ಹಾಗು ತಂಡದವರು, ಮತ್ತು ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಟಿ ಕೊಳಚಿ ಹಾಗು ಸಂಘದ ಗೌರವ ಕಾರ್ಯದರ್ಶಿ ಸುಭಾಸ್ ಬೈಲ್ವಾಡ್ ಹಾಗೂ ಪದಾಧಿಕಾರಿಗಳಾದ ಸದಾನಂದ, ಈರಣ್ಣ, ಆರ್ ಕೆ ಪವಾರ್, ಶಿವಪ್ಪ, ರಂಗಸ್ವಾಮಿ, ಆನಂದ, ಮೀನಾಕ್ಷಿ, ಉದ್ಯೋಗಿಗಳಾದ ಎಂ ಕೆ ಗೌಡ, ಎ ಎಸ್ ಪಠಾಣ್, ಆರ್ ಎಂ ಛಲವಾದಿ ಉಪಸ್ಥಿತರಿದ್ದರು.

ವರದಿ:- ವೇಣುಗೋಪಾಲ ಮದ್ಗುಣಿ.

error: