May 5, 2024

Bhavana Tv

Its Your Channel

ಶಿವರಾಮ ಹೆಬ್ಬಾರವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ದಾಂಡೇಲಿ: – ನೂತನವಾಗಿ ರಚನೆಯಾಗುವ ಮಂತ್ರಿ ಮಂಡಳದಲ್ಲಿ ಯಲ್ಲಾಪುರ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರವರಿಗೆ ಸಚಿವ ಸ್ಥಾನ ನೀಡಲು ಅಂಬೇಡ್ಕರ್ ಅಭಿಮಾನಿ ಸೇನೆ ಭೀಮಧ್ವನಿ(ರಿ)ಯವರು ಆಗ್ರಹಿಸಿದ್ದಾರೆ.ಶಿವರಾಮ ಹೆಬ್ಬಾರವರು ಕಾರ್ಮಿಕ ಸಚಿವರಾಗಿ ಒಳ್ಳೇಯ ಕೆಲಸ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಅವರು ಕಾರ್ಮಿಕರ ಬಗ್ಗೆ ತೋರಿದ ಪ್ರೀತಿ, ಸಹಾಯ ಅಪಾರ.ತಮ್ಮ ಇಲಾಖೆಯಲ್ಲಿ ಅನೇಕ ನೂತನ ಯೋಜನೆಗಳನ್ನು ತಂದು ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಬಡವರ, ದಿನದಲಿತರ ಪರವಾಗಿ ಕೆಲಸ ಮಾಡುವ ಇವರನ್ನು ಮಂತ್ರಿ ಮಂಡಳದಲ್ಲಿ ಸೇರಿಸಿಕೊಳ್ಳಬೇಕು.
ಈ ಕುರಿತು ದಾಂಡೇಲಿ ನಗರದ ಹನುಮಂತ ಭೂವಿ, ಸ್ಯಾಮ್ಯುವೆಲ್ ಜಾವಾ, ಅಪ್ಪಾಸಾಬ ಕಾಂಬಳೆ,ರಾಜು ಕಾಂಬಳೆ,ರಾಕೇಶ್ ಬಡಿಗೇರ,ಜಾನ್ ಪೋಟ್ಟೀ, ನತನೇಲ್ ಸುವರ್ಣ, ಮುಂತಾದವರು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಆಗ್ರಹಿಸಿದ್ದಾರೆ.
ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

error: