ದಾಂಡೇಲಿ: – ನೂತನವಾಗಿ ರಚನೆಯಾಗುವ ಮಂತ್ರಿ ಮಂಡಳದಲ್ಲಿ ಯಲ್ಲಾಪುರ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರವರಿಗೆ ಸಚಿವ ಸ್ಥಾನ ನೀಡಲು ಅಂಬೇಡ್ಕರ್ ಅಭಿಮಾನಿ ಸೇನೆ ಭೀಮಧ್ವನಿ(ರಿ)ಯವರು ಆಗ್ರಹಿಸಿದ್ದಾರೆ.ಶಿವರಾಮ ಹೆಬ್ಬಾರವರು ಕಾರ್ಮಿಕ ಸಚಿವರಾಗಿ ಒಳ್ಳೇಯ ಕೆಲಸ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಅವರು ಕಾರ್ಮಿಕರ ಬಗ್ಗೆ ತೋರಿದ ಪ್ರೀತಿ, ಸಹಾಯ ಅಪಾರ.ತಮ್ಮ ಇಲಾಖೆಯಲ್ಲಿ ಅನೇಕ ನೂತನ ಯೋಜನೆಗಳನ್ನು ತಂದು ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಬಡವರ, ದಿನದಲಿತರ ಪರವಾಗಿ ಕೆಲಸ ಮಾಡುವ ಇವರನ್ನು ಮಂತ್ರಿ ಮಂಡಳದಲ್ಲಿ ಸೇರಿಸಿಕೊಳ್ಳಬೇಕು.
ಈ ಕುರಿತು ದಾಂಡೇಲಿ ನಗರದ ಹನುಮಂತ ಭೂವಿ, ಸ್ಯಾಮ್ಯುವೆಲ್ ಜಾವಾ, ಅಪ್ಪಾಸಾಬ ಕಾಂಬಳೆ,ರಾಜು ಕಾಂಬಳೆ,ರಾಕೇಶ್ ಬಡಿಗೇರ,ಜಾನ್ ಪೋಟ್ಟೀ, ನತನೇಲ್ ಸುವರ್ಣ, ಮುಂತಾದವರು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಆಗ್ರಹಿಸಿದ್ದಾರೆ.
ವೇಣುಗೋಪಾಲ ಮದ್ಗುಣಿ. ಯಲ್ಲಾಪುರ
More Stories
ದಾಂಡೇಲಿಯಲ್ಲಿ ನಡೆದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ
ಹಣತೆಯಿಂದ ಸಾರಾ ಅಬೂಬಕ್ಕರ್ಗೆ ಅರ್ಥಪೂರ್ಣ ಗೌರವ : ಡಾ: ತೃಪ್ತಿ ನಾಯಕ
ಜ. 8 : ‘ಹಣತೆ’ ದಾಂಡೇಲಿ ತಾಲೂಕು ಘಟಕದ ಉದ್ಘಾಟನೆ