May 5, 2024

Bhavana Tv

Its Your Channel

ನಗರ ಸಭಾ ಉಪ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

ದಾಂಡೇಲಿ : ದಾಂಡೇಲಿ ನಗರ ಸಭೆಯ ವಾರ್ಡ್ ನಂ:೧೧ ಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದರ ಮೂಲಕ ತನ್ನ ಸ್ಥಾನವನ್ನು ಬಿಟ್ಟುಕೊಡದೆ ಮತ್ತೊಮ್ಮೆ ಬಿಗಿದಪ್ಪಿಕೊಂಡಿದೆ. ಸೋಮವಾರ ಬೆಳಿಗ್ಗೆ ನಗರ ಸಭೆಯ ಸಭಾಭವನದಲ್ಲಿ ಮತ ಏಣಿಕೆ ಪ್ರಕ್ರಿಯೆ ನಡೆಯಿತು.

ಕಾಂಗ್ರೆಸಿನಿAದ ಸ್ಪರ್ಧಿಸಿದ್ದ ಸಿದ್ದ ಮಹಾದೇವ ಈರಣ್ಣ ಜಮಾದಾರ ಅವರು ೫೬೧ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೇ, ಇತ್ತ ಬಿಜೆಪಿ ಅಭ್ಯರ್ಥಿ ಗೋಪಾಲಸಿಂಗ್ ರಜಪೂತ್ ಅವರು ೩೭೦ ಮತಗಳನ್ನಷ್ಟೆ ಪಡೆಯಲು ಶಕ್ತರಾಗಿದ್ದಾರೆ. ೧೦ ಮತಗಳು ನೋಟಾ ಮತಗಳಾಗಿವೆ. ವಿಜೇತ ಅಭ್ಯರ್ಥಿ ಮಹಾದೇವ ಈರಣ್ಣ ಜಮಾದಾರ ಅವರು ೧೯೧ ಮತಗಳ ಅಂತರದಿAದ ಗೆಲುವು ಸಾಧಿಸಿದ್ದಾರೆ.

ಒಟ್ಟು ೧೬೬೨ ಮತದಾರರ ಪೈಕಿ ೯೪೧ ಮತದಾರರು ಮತ ಚಲಾಯಿಸಿದ್ದರು. ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಮೇಲುಸ್ತುವಾರಿಯಲ್ಲಿ ಚುನಾವಣಾಧಿಕಾರಿ ಪಿ.ಐ.ಮಾನೆ ಹಾಗೂ ಸಹಾಯಕ ಚುನಾವಣಾಧಿಕಾರಿ ಅಭಯ್ ಎಸ್.ವಾಡಕರ ಅವರು ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು.

ನಿಷೇಧಾಜ್ಞೆ ಜಾರಿಯಿರುವ ಹಿನ್ನಲೆಯಲ್ಲಿ ಮತ ಏಣಿಕೆ ಕೇಂದ್ರದ ಬಳಿ ಪಿಎಸೈ ಯಲ್ಲಪ್ಪ.ಎಸ್ ಹಾಗೂ ತನಿಖಾ ಪಿಎಸೈ ಕಿರಣ್ ಪಾಟೀಲ ಅವರುಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತನ್ನು ಒದಗಿಸಲಾಗಿತ್ತು. ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಮುಖಂಡರುಗಳ ಹಾಗೂ ಕಾರ್ಯಕರ್ತರುಗಳು ಮತ ಏಣಿಕೆಯ ಹೊರಗಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

error: