ಹೊನ್ನಾವರ:- ನಗರದಲ್ಲಿ “ಬೊಬ್ಬಿ” ಎಂದೇ ಎಲ್ಲರ ಬಾಯಲ್ಲಿ ಚಿರಪರಿಚಿತರಾಗಿದ್ದ, ಸಾಮಾಜಿಕ ಕಾರ್ಯಕರ್ತ, ಹೊನ್ನಾವರ ನಾಫಿಕರ ಸಂಘದ ಅಧ್ಯಕ್ಷ ಶಿವಾನಂದ ಗುಣ್ಣಾ ಮಹಾಲೆ (೫೫) ಇಂದು ನಸುಕಿನ ಜಾವ ಹೃದಯ ಸ್ತಂಭನದಿAದ ಸ್ವ-ಗೃಹದಲ್ಲಿ ಕೊನೆಯುಸಿರೆಳೆದರು. ಅನೇಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವಾನಂದ ಮಹಾಲೆ ಅನೇಕ ಬಾರಿ ತಮ್ಮ ಅಂಗಡಿಯಲ್ಲಿ ಆಕಸ್ಮಿಕವಾಗಿ ದೊರೆತ ಲಕ್ಷಾಂತರ ರೂಪಾಯಿಗಳ ಒಡವೆಗಳನ್ನು ಮತ್ತು ಸಾವಿರಾರು ರೂಪಾಯಿ ನಗದನ್ನು ವಾರುಸುದಾರರಿಗೆ ಹಿಂತಿರುಗಿಸಿ ತಮ್ಮ ಪ್ರಾಮಾಣಿಕತೆಯನ್ನು ಮೆರೆದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಇವರು ತಮ್ಮ ಎರಡು ಪತ್ರಿ, ಪತ್ನಿ ಹಾಗೂ ಅನೇಕ ಬಂಧು ಬಾಂಧವರನ್ನು ಆಗಲಿದ್ದಾರೆ. ಹೊನ್ನಾವರ ನಾಫಿಕರ ಸಂಘದ ಅಧ್ಯಕ್ಷ ಶಿವಾನಂದ ಮಹಾಲೆಯವರ ಆಗಲಿಕೆಯ ಕುರಿತಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಕಂಬನಿ ಮಿಡಿದ್ದಾರೆ.
More Stories
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು