May 19, 2024

Bhavana Tv

Its Your Channel

ಶ್ರೀದೇವಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ಹೊನ್ನಾವರ: ಆಯ್.ಎಮ್.ಎ ಹೊನ್ನಾವರ ಹಾಗೂ ಲಯನ್ಸ್ ಕ್ಲಬ್ ಹೊನ್ನಾವರ ಇವುಗಳ ಜಂಟಿ ಆಶ್ರಯದಲ್ಲಿ ಹೊನ್ನಾವರದ ಶ್ರೀದೇವಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.ಆಯ್.ಎಮ್.ಎ ಸದಸ್ಯರು, ಲಯನ್ಸ್ ಸದಸ್ಯರು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.ಈ ಸಂದರ್ಭದಲ್ಲಿ ಶ್ರೀದೇವಿ ಆಸ್ಪತ್ರೆಯ ಮೆನೆಜಿಂಗ್ ಡೈರೆಕ್ಟರ್ ಲಯನ್ ಡಾ.ವಿ .ಚಂದ್ರಶೇಖರ ಶೆಟ್ಟಿ, ಆಯ್.ಎಮ್.ಎ ಅಧ್ಯಕ್ಷರಾದ ಡಾ.ವಿಶಾಲ್. ವಿ,ಕಾರ್ಯದರ್ಶಿ ಡಾ.ವಿನಾಯಕ ರಾಯ್ಕರ್, ಉಪಾಧ್ಯಕ್ಷರಾದ ಡಾ.ಭಾರ್ಗವ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ವಿನೋದ ನಾಯ್ಕ, ಕಾರ್ಯದರ್ಶಿ ಲಯನ್ ಉದಯ ನಾಯ್ಕ, ಝಡ್.ಸಿ ಎಮ್.ಜೆ.ಎಪ್ ಲಯನ್ ರಾಜೇಶ ಸಾಳೇಹಿತ್ತಲ್,ಆಯ್.ಎಮ್.ಎ ಪದಾಧಿಕಾರಿಗಳು, ಸದಸ್ಯರು ಮತ್ತು ಲಯನ್ಸ್ ಕ್ಲಬ್ಬಿನ ಸದಸ್ಯರು ಹಾಜರಿದ್ದರು.

error: