May 19, 2024

Bhavana Tv

Its Your Channel

ಪೊಲೀಸ್ ಇಲಾಖೆ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ಹೊನ್ನಾವರ ಪೊಲೀಸ್ ಇಲಾಖೆಯ ಸಂಘಟನೆಯಲ್ಲಿ ಹೊನ್ನಾವರ ಪೊಲೀಸ್ ಪರೇಡ್ ಮೈದಾನದಲ್ಲಿ ವನಮಹೋತ್ಸವ ಕಾರ್ಯಕ್ರಮ ಗುರುವಾರ ನಡೆಯಿತು.

ನ್ಯಾಯಾಧೀಶರಾದ ಗುಡ್ಡಪ್ಪ ಬಿ.ಹಳಕೈ, ಕುಮಾರ ಜಿ. ಹಾಗೂ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಅವರು ಗಿಡ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಡಿವೈಎಸ್‌ಪಿ ಬೆಳ್ಳಿಯಪ್ಪ, ಸಿಪಿಐ ಶ್ರೀಧರ ಎಸ್.ಆರ್, ಪಿಎಸ್‌ಐ ಶಶಿಕುಮಾರ, ಅಪರಾಧ ವಿಭಾಗದ ಪಿಎಸ್‌ಐ ಸಾವಿತ್ರಿ ನಾಯಕ, ಮಹಂತೇಶ, ಹಿರಿಯ ಪತ್ರಕರ್ತ ಜಿ.ಯು.ಭಟ್, ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ ನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷ ಸ್ಟೀಫನ್ ರೊಡ್ರಗೀಸ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಮೇಧಾ ನಾಯ್ಕ, ಸ್ವಚ್ಛ ಹೊನ್ನಾವರ ಸಂಘಟನೆಯ ಸದಸ್ಯರು ಹಾಜರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಗೌರವಾನ್ವಿತರಿಗೆ ಹೊನ್ನಾವರ ಠಾಣೆಯ ಪೊಲೀಸ್ ಕಾನಸ್ಟೇಬಲ್ ಮಂಜುನಾಥ ಯಲ್ವಾಡಿ ಕಾವೂರ ಅವರು ಬರೆದ ಕವಿತೆಗಳ ಪುಸ್ತಕವನ್ನು ನೀಡಿ ಗೌರವಿಸಲಾಯಿತು.
ಇಇಆರ್‌ಎಸ್‌ಎಸ್ ೧೧೨' ಬಗ್ಗೆ ಜಾಗೃತಿ: ಪೊಲೀಸ್, ಅಗ್ನಿ, ವಿಪತ್ತು ಸೇವೆಗಳಿಗಾಗಿ ೨೪ ಗಂಟೆಗಳ ನಿರಂತರ ಸೇವೆ ಲಭ್ಯವಿರುವ ಸಾರ್ವಜನಿಕರಿಗೆಇಆರ್‌ಎಸ್‌ಎಸ್ ೧೧೨’ ವಾಹನದ ಸೇವೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ನ್ಯಾಯಾದೀಶರಾದ ಗುಡ್ಡಪ್ಪ ಬಿ.ಹಳಕೈ, ಕುಮಾರ ಜಿ. ಹಾಗೂ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಅವರಿಂದ ಪಟ್ಟಣದ ಆಟೋ ರಿಕ್ಷಾ ನಿಲ್ದಾಣಳಿಗೆ ತೆರಳಿ ೧೧೨ ವಾಹನದ ಸೇವೆಯ ಮಾಹಿತಿಯಿರುವ ಕರಪತ್ರಗಳನ್ನು ಅಂಟಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಆಂದೋಲನಕ್ಕೆ ಚಾಲನೆ ನೀಡಲಾಯಿತು.

error: